Select Your Language

Notifications

webdunia
webdunia
webdunia
webdunia

ಹೊಲಕ್ಕೆ ಹೊರಟ ಮಹಿಳೆ ಮೇಲೆ ಏನಾಯ್ತು?

ಹೊಲಕ್ಕೆ ಹೊರಟ ಮಹಿಳೆ ಮೇಲೆ ಏನಾಯ್ತು?
ಬೆಂಗಳೂರು , ಭಾನುವಾರ, 28 ಜುಲೈ 2019 (19:36 IST)
ಬೆಳಗ್ಗೆ ಎದ್ದು ಹೊಲಕ್ಕೆ ಹೊರಟಿದ್ದ ಮಹಿಳೆ ಮೇಲೆ ಆಗಬಾರದ ಘಟನೆ ಆಗಿಹೋಗಿದೆ.

ಮಹಿಳೆಯ ಮೇಲೆ ಕಾಡಾನೆ ದಾಳಿ ನಡೆಸಿದೆ. ಪರಿಣಾಮ ಸ್ಥಳದಲ್ಲೇ ಮಹಿಳೆ ಮೃತಪಟ್ಟಿರುವಂತಹ ಘಟನೆ ಕರ್ನಾಟಕ- ತಮಿಳುನಾಡು ಗಡಿಯ ಸೂಳಗಿರಿ ಸಮೀಪದ ಚಿನ್ನಪ್ಪನಪಲ್ಲಿ ಗ್ರಾಮದಲ್ಲಿ ನಡೆದಿದೆ.

ಕಾಡಾಂಚಿನ ಗ್ರಾಮವಾದ ಚಿನ್ನಪ್ಪನಪಲ್ಲಿಯ ಮಹಿಳೆ ಮುಂಜಾನೆ ಹೊಲದ ಕಡೆ ನಡೆದು ಹೋಗುವಾಗ ಕಾಡಾನೆ ದಾಳಿ ಮಾಡಿದ್ದು, ಮಹಿಳೆ ಮುನಿಯಮ್ಮ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ನಂತರ ಅಲ್ಲಿನ ಗ್ರಾಮದ ಜನರು ನೋಡಿ ಅರಣ್ಯ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಸಿಬ್ಬಂದಿ ಪರಿಶೀಲನೆ ನಡೆಸಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ. ಮೃತ ಮುನಿಯಮ್ಮ ಸಾವಿಗೆ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಅತೃಪ್ತ ಶಾಸಕರು ಅನರ್ಹಗೊಂಡಿದ್ದೇ ಸರಿ ಎಂದ ಸಿದ್ದರಾಮಯ್ಯ