Select Your Language

Notifications

webdunia
webdunia
webdunia
webdunia

ಶಿವ-ಶಂಕರಮ್ಮ ಸೇರಿ ಮಾಡಿದ ಖತರ್ನಾಕ್ ಕೆಲಸ ಏನು ಗೊತ್ತಾ?

ಶಿವ-ಶಂಕರಮ್ಮ ಸೇರಿ ಮಾಡಿದ ಖತರ್ನಾಕ್ ಕೆಲಸ ಏನು ಗೊತ್ತಾ?
ಆನೇಕಲ್ , ಗುರುವಾರ, 30 ಮೇ 2019 (18:33 IST)
ಶಿವ ಮತ್ತು ಶಂಕರಮ್ಮ ಸೇರಿ ಮಾಡಬಾರದ ಕೆಲಸ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧನವಾಗಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಸರ್ಜಾಪುರ ಪೊಲೀಸರ ಯಶಸ್ವಿ ಕಾರ್ಯಾಚರಣೆ ನಡೆಸುವ ಮೂಲಕ ಬಂಧಿಸಲಾಗಿದೆ.

ದೊಮ್ಮಸಂದ್ರ ಸರ್ಕಲ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ  ವೇಳೆ ಬಂಧಿಸಿದ್ದಾರೆ ಪೊಲೀಸರು.

ಶಿವ ಮತ್ತು ಶಂಕರಮ್ಮ ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತ ಆರೋಪಿಗಳಿಂದ 2,40,000 ಬೆಳೆಬಾಳುವ 8 ಕೆಜಿ ಗಾಂಜಾ ವಶಕ್ಕೆ ಪಡೆದುಕೊಳ್ಳಲಾಗಿದೆ. ಆಯುಬ್ ಮತ್ತು ವಾಸಿಂ ಖಾನ್ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಹುಡುಕಾಟ ಮುಂದುವರಿದಿದೆ. ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಬೋನಿಗೆ ಬಿದ್ದ ಚಿರತೆ; ಚಿಂತೆ ಬಿಟ್ಟ ಜನತೆ