Select Your Language

Notifications

webdunia
webdunia
webdunia
webdunia

ಚಿಂಚೋಳಿಯಲ್ಲಿ ಗೆಲ್ಲಲು ಕಾಂಗ್ರೆಸ್ ಹೂಡಿದ ರಣತಂತ್ರವೇನು ಗೊತ್ತಾ?

ಚಿಂಚೋಳಿಯಲ್ಲಿ ಗೆಲ್ಲಲು  ಕಾಂಗ್ರೆಸ್ ಹೂಡಿದ ರಣತಂತ್ರವೇನು ಗೊತ್ತಾ?
ಚಿಂಚೋಳಿ , ಮಂಗಳವಾರ, 7 ಮೇ 2019 (10:26 IST)
ಚಿಂಚೋಳಿ : ಚಿಂಚೋಳಿ ಉಪಚುನಾವಣೆ ಹಿನ್ನಲೆ ರಾಜಕೀಯ ನಾಯಕರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಈ ವೇಳೆ ಡಾ.ಉಮೇಶ್ ಜಾಧವ್ ಅವರನ್ನು ಗುರಿಯಾಗಿಸಿಕೊಂಡುಕೈ ನಾಯಕರು  ಪ್ರಚಾರ ಮಾಡುತ್ತಿದ್ದಾರೆ ಎನ್ನಲಾಗಿದೆ.




ಚಿಂಚೋಳಿ ಕ್ಷೇತ್ರದ ಶಾಸಕರಾಗಿದ್ದ ಡಾ.ಉಮೇಶ್ ಜಾಧವ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದಾರೆ. ಇದರಿಂದ ರೊಚ್ಚಿಗೆದ್ದ ಕಾಂಗ್ರೆಸ್ ನಾಯಕರು, ಉಮೇಶ್ ಜಾಧವ್ ಅವರು 50 ಕೋಟಿ ತಾವು ಮಾರಾಟವಾಗಿದ್ದಲ್ಲದೇ ಚಿಂಚೋಳಿ ಕ್ಷೇತ್ರದ ಮತದಾರರನ್ನು ಮಾರಾಟ ಮಾಡಿದ್ದಾರೆ ಎಂದು ಆರೋಪ ಮಾಡಿದ್ದರು.


ಇದನ್ನೇ ಅಸ್ತ್ರವಾಗಿಟ್ಟುಕೊಂಡ ಕೈ ಅಭ್ಯರ್ಥಿ ಸುಭಾಸ್ ರಾಠೋಡ್ ಅವರು ಇದೀಗ ಎಲ್ಲಾ ಸಭೆ ಸಮಾರಂಭಗಳಲ್ಲಿ ನಾನು ಮಾರಾಟವಾಗುವುದಿಲ್ಲವೆಂದು ಪ್ರಮಾಣ ಮಾಡಿ ಪ್ರಚಾರ ಮಾಡುತ್ತಿದ್ದಾರೆ. ಈ ಮೂಲಕ ಚಿಂಚೋಳಿಯಲ್ಲಿ ಗೆಲ್ಲಲು  ಕಾಂಗ್ರೆಸ್ ರಣತಂತ್ರ ರೂಪಿಸಿದೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

50 ಕೋಟಿ ಕೊಟ್ಟರೆ ಪ್ರಧಾನಿ ಮೋದಿ ಹತ್ಯೆಗೆ ಸಿದ್ಧ ಎಂದ ಮಾಜಿ ಯೋಧ; ವಿಡಿಯೋ ವೈರಲ್