Select Your Language

Notifications

webdunia
webdunia
webdunia
webdunia

ಬೋನಿಗೆ ಬಿದ್ದ ಚಿರತೆ; ಚಿಂತೆ ಬಿಟ್ಟ ಜನತೆ

ಬೋನಿಗೆ ಬಿದ್ದ ಚಿರತೆ; ಚಿಂತೆ ಬಿಟ್ಟ ಜನತೆ
ತುಮಕೂರು , ಗುರುವಾರ, 30 ಮೇ 2019 (18:29 IST)
ಬಹಳ ದಿನಗಳಿಂದ ಅಲ್ಲಿನ ಜನರ ನಿದ್ದೆಗೆಡಿಸಿದ ಚಿರತೆ ಕೊನೆಗೂ ಬೋನಿಗೆ  ಬಿದ್ದಿದೆ.

ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ಬಿದ್ದ ಚಿರತೆಯಿಂದಾಗಿ ಅಲ್ಲಿನ ಜನರು ತುಸು ನೆಮ್ಮದಿಯ ನಿಟ್ಟುಸಿರು ಹಾಗೂ ಚಿಂತೆ ಬಿಡುವಂತಾಗಿದೆ.

ತುಮಕೂರು ಜಿಲ್ಲೆಯ ತುರುವೆಕೆರೆ ತಾಲೂಕಿನ ಬಸವಾಪುರ ಕಾವಲ್‌ನಲ್ಲಿ ಘಟನೆ ನಡೆದಿದೆ. ಗ್ರಾಮದ ಹೊರವಲಯದ ಅರಣ್ಯಪ್ರದೇಶದಲ್ಲಿ ಇಟ್ಟಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ.

ಹಲವು ದಿನಗಳಿಂದ ಹಸು, ಕರು ಮೇಕೆಗಳಿಗೆ ತೊಂದರೆ ನೀಡುತ್ತಿದ್ದ ಚಿರತೆ ಜನರಲ್ಲಿ ಜೀವ ಭಯಕ್ಕೆ ಕಾರಣವಾಗಿತ್ತು. ಚಿರತೆ ಸೆರೆಯಾಗಿರುವ ಹಿನ್ನೆಲೆಯಲ್ಲಿ ನಿಟ್ಟುಸಿರು ಬಿಟ್ಟಿರುವ ಸುತ್ತಮುತ್ತಲಿನ ಗ್ರಾಮಸ್ಥರು ಅರಣ್ಯ ಅಧಿಕಾರಿಗಳ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಆಹಾರ ನಿರೀಕ್ಷಕರ ಕೊಲೆ ಯತ್ನ; ಮೂವರ ಬಂಧನ