Select Your Language

Notifications

webdunia
webdunia
webdunia
webdunia

ಸೆರೆಸಿಕ್ಕ ಖದೀಮರು ಏನ್ಮಾಡ್ತಿದ್ರು ಗೊತ್ತಾ?

ಸೆರೆಸಿಕ್ಕ ಖದೀಮರು ಏನ್ಮಾಡ್ತಿದ್ರು ಗೊತ್ತಾ?
ಆನೇಕಲ್ , ಶುಕ್ರವಾರ, 5 ಏಪ್ರಿಲ್ 2019 (17:26 IST)
ವಿವಿಧ ಪೋಲಿಸ್ ಠಾಣೆಗಳಲ್ಲಿ ಒಂಭತ್ತಕ್ಕೂ ಹೆಚ್ಚು ಪ್ರಕರಣಗಳಿಗೆ ಬೇಕಾಗಿದ್ದ ಆರೋಪಿಗಳ ಬಂಧನವಾಗಿದೆ.

ಮನೆಗಳ್ಳತನ ಮಾಡುತ್ತಿದ್ದ ಖದೀಮರ ಬಂಧನ ಮಾಡಲಾಗಿದೆ. ಬೆಂಗಳೂರು ಉಪವಿಭಾಗ ಹೆಬ್ಬಗೋಡಿ ಪೊಲೀಸರು  ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಹೆಬ್ಬಗೋಡಿ, ಸೂರ್ಯನಗರ, ಆನೇಕಲ್, ಹೊಸಕೋಟೆ ಪೊಲೀಸ್ ಠಾಣಾ  ವ್ಯಾಪ್ತಿಯಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೆ.ಗಣೇಶ್, ಮನೀಸ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.

ವಿವಿಧ ಪೋಲಿಸ್ ಠಾಣೆಗಳಲ್ಲಿ ಒಂಭತ್ತಕ್ಕೂ ಹೆಚ್ಚು ಪ್ರಕರಣಗಳಿಗೆ ಬೇಕಾಗಿದ್ದ ಕಳ್ಳರು ಇವರಾಗಿದ್ದರು. ಆರೋಪಿಗಳಿಂದ 54,60,000 ಬೆಲೆ ಬಾಳುವ 1820  ಚಿನ್ನಾಭರಣ ವಶ ಪಡಿಸಿಕೊಂಡ ಪೊಲೀಸರು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಗಾಂಧಿಗಳೆಲ್ಲ ನಕಲಿ ಗಾಂಧಿಗಳಂತೆ!