Select Your Language

Notifications

webdunia
webdunia
webdunia
webdunia

ವೆಂಕಟೇಶ್ ಪ್ರಸಾದ್ ಬಿಜೆಪಿ ಅಭ್ಯರ್ಥಿ?

ವೆಂಕಟೇಶ್ ಪ್ರಸಾದ್ ಬಿಜೆಪಿ ಅಭ್ಯರ್ಥಿ?
ಬಳ್ಳಾರಿ , ಸೋಮವಾರ, 18 ಮಾರ್ಚ್ 2019 (14:57 IST)
ವೆಂಕಟೇಶ್ ಪ್ರಸಾದ್ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯನ್ನಾಗಿಸಲು  ಹೈಕಮಾಂಡ್ ಮೇಲೆ ಒತ್ತಡ ಹಾಕಲು ಮನವಿ ಮಾಡಿದ್ದಾರೆ ಅಂತ ರಾಜ್ಯ ಬಿಜೆಪಿ ಉಪಾಧ್ಯಕ್ಷ ಶ್ರೀರಾಮುಲು ಹೇಳಿದ್ದಾರೆ.

ಬಳ್ಳಾರಿಯಲ್ಲಿ ಮಾತನಾಡಿದ ಶ್ರೀರಾಮುಲು, ನನ್ನ ಬಳಿ ವೆಂಕಟೇಶ್ ಪ್ರಸಾದ್ ಬಂದಿದ್ದು ನಿಜ. ನಾನು ಹೇಳಿದ್ದೇನೆ,  ನೀವು ಬೇರೊಂದು ಪಕ್ಷದ‌ ಜೊತೆ ಗುರುತಿಸಿಕೊಂಡಿದ್ದೀರಿ. ಇದೀಗ ಬಿಜೆಪಿ ಲೋಕಸಭಾ ಚುನಾವಣೆಗೆ ಟಿಕೆಟ್ ಕೇಳಿದ್ದರ ಬಗ್ಗೆ ಪಕ್ಷದಲ್ಲಿ ತಿಳಿಸಿ ಚರ್ಚಿಸುತ್ತೇವೆ ಎಂದ್ರು.

ವೆಂಕಟೇಶ್ ಪ್ರಸಾದ್ ಬಿಜೆಪಿ ಅಭ್ಯರ್ಥಿಯಾಗಿ ಬಳ್ಳಾರಿ ಲೋಕಸಭಾ ಕ್ಷೆತ್ರಕ್ಕೆ ಕಣಕ್ಕಿಳಿಯಲು ಸತತ ಪ್ರಯತ್ನ ನಡೆಸಿದ್ದು,  ಇವರ ಸಹೋದರ ಬಳ್ಳಾರಿ ಗ್ರಾಮೀಣ ಕ್ಷೆತ್ರದ ಕಾಂಗ್ರೆಸ್ ಶಾಸಕ ನಾಗೇಂದ್ರ  ದೆಹಲಿ ಬಿಜೆಪಿ ಮುಖಂಡರನ್ನು ಮನವೊಲಿಸುವಲ್ಲಿ ತೊಡಗಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಖಾಕಿ ಪಡೆಗೆ ಆತ್ಮಗಳ ಕಾಟ