Publish Date: Mon, 18 Mar 2019 (14:57 IST)
Updated Date: Mon, 18 Mar 2019 (15:00 IST)
ವೆಂಕಟೇಶ್ ಪ್ರಸಾದ್ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯನ್ನಾಗಿಸಲು ಹೈಕಮಾಂಡ್ ಮೇಲೆ ಒತ್ತಡ ಹಾಕಲು ಮನವಿ ಮಾಡಿದ್ದಾರೆ ಅಂತ ರಾಜ್ಯ ಬಿಜೆಪಿ ಉಪಾಧ್ಯಕ್ಷ ಶ್ರೀರಾಮುಲು ಹೇಳಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಶ್ರೀರಾಮುಲು, ನನ್ನ ಬಳಿ ವೆಂಕಟೇಶ್ ಪ್ರಸಾದ್ ಬಂದಿದ್ದು ನಿಜ. ನಾನು ಹೇಳಿದ್ದೇನೆ, ನೀವು ಬೇರೊಂದು ಪಕ್ಷದ ಜೊತೆ ಗುರುತಿಸಿಕೊಂಡಿದ್ದೀರಿ. ಇದೀಗ ಬಿಜೆಪಿ ಲೋಕಸಭಾ ಚುನಾವಣೆಗೆ ಟಿಕೆಟ್ ಕೇಳಿದ್ದರ ಬಗ್ಗೆ ಪಕ್ಷದಲ್ಲಿ ತಿಳಿಸಿ ಚರ್ಚಿಸುತ್ತೇವೆ ಎಂದ್ರು.
ವೆಂಕಟೇಶ್ ಪ್ರಸಾದ್ ಬಿಜೆಪಿ ಅಭ್ಯರ್ಥಿಯಾಗಿ ಬಳ್ಳಾರಿ ಲೋಕಸಭಾ ಕ್ಷೆತ್ರಕ್ಕೆ ಕಣಕ್ಕಿಳಿಯಲು ಸತತ ಪ್ರಯತ್ನ ನಡೆಸಿದ್ದು, ಇವರ ಸಹೋದರ ಬಳ್ಳಾರಿ ಗ್ರಾಮೀಣ ಕ್ಷೆತ್ರದ ಕಾಂಗ್ರೆಸ್ ಶಾಸಕ ನಾಗೇಂದ್ರ ದೆಹಲಿ ಬಿಜೆಪಿ ಮುಖಂಡರನ್ನು ಮನವೊಲಿಸುವಲ್ಲಿ ತೊಡಗಿದ್ದಾರೆ.