Publish Date: Sun, 17 Mar 2019 (18:44 IST)
Updated Date: Sun, 17 Mar 2019 (18:46 IST)
ಬಿಜೆಪಿ ನನಗೆ ಇಷ್ಟ ಇಲ್ಲ. ಬಿಜೆಪಿ ಆಡಳಿತ ವೈಖರಿ ನನಗೆ ಇಷ್ಟವಿಲ್ಲ. ಹೀಗಂತ ನಟ ಪ್ರಕಾಶ್ ರಾಜ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಟ ಪ್ರಕಾಶ್ ರಾಜ್ ಹೇಳಿಕೆ ನೀಡಿದ್ದು, ಕಾಂಗ್ರೆಸ್ ಬೆಂಬಲ ವಿಚಾರ ಸಂಬಂಧ ಮಾತನಾಡಿದ್ದಾರೆ.
ನನಗೆ ಆಪ್, ಸಿಪಿಎಂ, ಸಿಪಿಐ, ದಲಿತ ಸಂಘರ್ಷ ಸಮಿತಿಗಳಿಂದ ಬೆಂಬಲ ಸಿಕ್ಕಿದೆ. ದೇವೇಗೌಡರನ್ನು ಭೇಟಿ ಮಾಡಿ ಬೆಂಬಲ ಕೇಳಿದ್ದೇನೆ. ಮೈತ್ರಿ ಸರ್ಕಾರ ಇದೆ ನೋಡೋಣ ಅಂದಿದ್ದಾರೆ. ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಬೆಂಬಲ ಕೇಳಿದ್ದೇನೆ ಎಂದರು.
ಹತ್ತು ವರ್ಷಗಳಿಂದ ಬೆಂಗಳೂರು ಕೇಂದ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿಲ್ಲ. ಅದಕ್ಕಾಗಿ ಬೆಂಬಲ ಕೊಡಿ ಅಂತ ಕೇಳಿದ್ದೇನೆ ಅಂತ ಪ್ರಕಾಶ್ ರಾಜ್ ಹೇಳಿದ್ದಾರೆ. ಬೆಂಗಳೂರು ಕೇಂದ್ರದಿಂದ ನಟ ಪ್ರಕಾಶ್ ರಾಜ್ ಸ್ಪರ್ಧಿಸೋಕೆ ರೆಡಿಯಾಗಿದ್ದಾರೆ.