Select Your Language

Notifications

webdunia
webdunia
webdunia
webdunia

ಎ. ಮಂಜು ಬಿಜೆಪಿ ಸೇರ್ಪಡೆ ನಿಶ್ಚಿತ

ಎ. ಮಂಜು ಬಿಜೆಪಿ ಸೇರ್ಪಡೆ ನಿಶ್ಚಿತ
ಬೆಂಗಳೂರು , ಭಾನುವಾರ, 17 ಮಾರ್ಚ್ 2019 (17:41 IST)
ಮಂಡ್ಯ ಲೋಕಸಭಾ ಕ್ಷೇತ್ರದ ಬಗ್ಗೆ ಸುಮಲತಾ ಅವ್ರ ನಿರ್ಧಾರದ ನಂತರ ತೀರ್ಮಾನ ಮಾಡ್ತೀವಿ. ಹಾಸನದಲ್ಲಿ ಎ. ಮಂಜು ಆದಷ್ಟು ಬೇಗ ಬಿಜೆಪಿಯನ್ನ ಸೇರುವರಿದ್ದಾರೆ. ಹೀಗಂತ ಬಿಜೆಪಿ ಕಾರ್ಯದರ್ಶಿ ಹೇಳಿದ್ದಾರೆ.

ಬಿಜೆಪಿ ಕೋರ್ ಕಮಿಟಿ ಸಭೆ ಬಳಿಕ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೇಳಿಕೆ ನೀಡಿದ್ದು,
ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಕುರಿತು ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ.

ಇಂದು ರಾತ್ರಿ ಅಥವಾ ನಾಳೆ ದೆಹಲಿಯಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆ ಇದೆ. ರಾಜ್ಯ ಕೋರ್ ಕಮಿಟಿಯಲ್ಲಿನ ತೀರ್ಮಾನಗಳನ್ನ ಕೇಂದ್ರ ಸಮಿತಿ ಮುಂದೆ ಇಡಲಾಗ್ತಿದೆ. ಎಲ್ಲ 28 ಕ್ಷೇತ್ರಗಳಿಗೆ ಶಾರ್ಟ್ ಲಿಸ್ಟ್  ಮಾಡಿದ್ದೇವೆ ಅಂದ್ರು.

ಹಾಸನ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎ. ಮಂಜು ಈಗಾಗಲೇ ಯಡಿಯೂರಪ್ಪನವರ ಸಂಪರ್ಕದಲ್ಲಿದ್ದಾರೆ ಅಂತ ಹೇಳಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಹಾಲಿ ಸಂಸದರಿಗೆ ಟಿಕೆಟ್ ಕನ್ಫರ್ಮ್