Select Your Language

Notifications

webdunia
webdunia
webdunia
webdunia

ಸುಮಲತಾ ಕೈ ಎತ್ತಿ ಮುಗಿದದ್ಯಾರಿಗೆ?

ಸುಮಲತಾ ಕೈ ಎತ್ತಿ ಮುಗಿದದ್ಯಾರಿಗೆ?
ಮಂಡ್ಯ , ಶನಿವಾರ, 16 ಮಾರ್ಚ್ 2019 (20:40 IST)
ಚುನಾವಣೆ ರಣಕಣ ದಿನಕ್ಕೊಂದು ಕುತೂಹಲ ಘಟ್ಟದತ್ತ ತೆರೆದುಕೊಳ್ಳುತ್ತಿದೆ. ಏತನ್ಮಧ್ಯೆ ಅಂಬರೀಶ್ ಸ್ಟೈಲ್ ನಲ್ಲಿ ಸುಮಲತಾ ಪ್ರಚಾರದಲ್ಲಿ ನಿರತರಾಗಿದ್ದಾರೆ.

ಮಂಡ್ಯ ಜಿಲ್ಲೆಯ ಕೆ ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ಆರಂಭಿಸಿದ ನಟಿ ಸುಮಲತಾ ಕಾರ್ಯಕರ್ತರನ್ನು ಭೇಟಿ ಮಾಡಿದ್ರು.

ಕೆ ಆರ್ ನಗರ ತಾಲೂಕಿನ ಭೇರ್ಯ ಗ್ರಾಮದಲ್ಲಿ ಸುಮಲತಾಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ತಾಲೂಕಿನ ಅಂಬರೀಶ್ ಅಭಿಮಾನಿಗಳಿಂದ ಸುಮಲತಾಗೆ ಸ್ವಾಗತ ದೊರೆಯಿತು. ಈ ಸಂದರ್ಭ ಕಾರಿನಿಂದ ಕೆಳಗೆ ಇಳಿದ ಸುಮಲತಾ ಕೈ ಎತ್ತಿ ಎಲ್ಲರಿಗೂ ಮುಗಿದು ನಮಸ್ಕಾರ ಮಾಡಿದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎರಡನೇ ಬಾರಿ ಕೆ ಆರ್ ನಗರಕ್ಕೆ ಆಗಮಿಸಿದ ಸುಮಲತಾ ನಿನ್ನೆ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕೆ ಆರ್ ನಗರದಲ್ಲಿ ಪ್ರಚಾರ ನಡೆಸಿರುವ ಬೆನ್ನಲ್ಲೇ ಭೇಟಿ ನೀಡಿರುವುದು ಚರ್ಚೆಗೆ ಕಾರಣವಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಮೈತ್ರಿಗೆ ದ್ರೋಹ ಮಾಡಿದ್ರೆ ತಂದೆ- ತಾಯಿಗೆ ದ್ರೋಹ ಮಾಡಿದಂತೆ ಎಂದ ಸಚಿವ