Select Your Language

Notifications

webdunia
webdunia
webdunia
webdunia

ಬಿಜೆಪಿ ಅಭ್ಯರ್ಥಿ ನಿಲ್ಲಿಸುವಂತೆ ಭಜರಂಗಸೇನೆ ಬಿಎಸ್ ವೈಗೆ ಒತ್ತಾಯ

ಬಿಜೆಪಿ ಅಭ್ಯರ್ಥಿ ನಿಲ್ಲಿಸುವಂತೆ ಭಜರಂಗಸೇನೆ ಬಿಎಸ್ ವೈಗೆ ಒತ್ತಾಯ
ಬೆಂಗಳೂರು , ಶುಕ್ರವಾರ, 15 ಮಾರ್ಚ್ 2019 (18:05 IST)
ಮಂಡ್ಯದಿಂದ ಬಿಜೆಪಿ ಅಭ್ಯರ್ಥಿಯನ್ನು ಕಣದಲ್ಲಿ ನಿಲ್ಲಿಸುವಂತೆ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಒತ್ತಡಗಳು ಹೆಚ್ಚುತ್ತಿವೆ.

ಮಂಡ್ಯ ಭಜರಂಗಸೇನೆ ಕಾರ್ಯಕರ್ತರು ಬಿ.ಎಸ್.ವೈ ಮನೆಗೆ ಭೇಟಿ ನೀಡಿ ಈ ಒತ್ತಾಯ ಮಾಡಿದ್ದಾರೆ. ಮಂಡ್ಯ ಮಂಜುನಾಥ್ ಅವರಿಗೆ ಟಿಕೆಟ್ ಕೊಡಬೇಕು ಅಂತಾ ಮನವಿ ಮಾಡಲು ಆಗಮಿಸಿದ್ದ ಕಾರ್ಯಕರ್ತರು, ಕಣದಲ್ಲಿ ಬಿಜೆಪಿ ಅಭ್ಯರ್ಥಿ ಸ್ಪರ್ಧೆ ಇರಲಿ ಎಂದಿದ್ದಾರೆ.

ಡಾಲರ್ಸ್ ಕಾಲೋನಿಯ ಬಿಎಸ್ ವೈ ಮನೆಗೆ ಆಗಮಿಸಿದ ಕಾರ್ಯಕರ್ತರಲ್ಲಿ ಪ್ರಮುಖರಾದ ಭಜರಂಗಸೇನೆ ರಾಜ್ಯಾಧ್ಯಕ್ಷ ಮಂಜುನಾಥ್ ಹೇಳಿಕೆ ನೀಡಿದ್ದು, ಸುಮಲತಾ ಬಿಜೆಪಿ ಅಭ್ಯರ್ಥಿಯಾದರೆ ಮಾತ್ರ ಮಂಡ್ಯದಲ್ಲಿ ಅವರನ್ನು ಬೆಂಬಲಿಸಬೇಕು.

ಪ್ರಸಕ್ತ ಕಾಂಗ್ರೆಸ್ ಬಿ ಟೀಂ ಬೆಂಬಲದೊಂದಿಗೆ ಸುಮಲತಾ ಸ್ಪರ್ಧಿಸಲು ಮುಂದಾಗಿದ್ದಾರೆ. ಅವರನ್ನು ಬೆಂಬಲಿಸುವುದರಿಂದ ಬಿಜೆಪಿಗೆ ಯಾವುದೇ ಅನುಕೂಲವಿಲ್ಲ. ಬಿಜೆಪಿ ಮತ್ತೊಮ್ಮೆ ಮೋಸ ಹೋಗುವುದು ಬೇಡ.  

ಸುಮಲತಾ ಬೆಂಬಲಿಸುವ ಬದಲು ಭಜರಂಗಸೇನೆಯ ರಾಜ್ಯಾಧ್ಯಕ್ಷರಾದ ನನಗೆ ಟಿಕೆಟ್ ಕೊಡಿ ಎಂದು ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೇನೆ ಎಂದರು.



Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳು ಪಬ್ಜಿ ಗೇಮ್ ಆಡ್ತಾ ಇದ್ದಾರಾ..? ಹಾಗಿದ್ದರೆ ಹುಷಾರ್...!