Select Your Language

Notifications

webdunia
webdunia
webdunia
webdunia

ತಮ್ಮದಲ್ಲದ ತಪ್ಪಿಗೆ ಇಬ್ಬರು ಮಕ್ಕಳು ಬಲಿ!

ತಮ್ಮದಲ್ಲದ ತಪ್ಪಿಗೆ ಇಬ್ಬರು ಮಕ್ಕಳು ಬಲಿ!
ರಾಯಚೂರು , ಸೋಮವಾರ, 3 ಜೂನ್ 2019 (15:49 IST)
ತಮ್ಮದಲ್ಲದ ತಪ್ಪಿಗೆ ಇನ್ನೂ ಬಾಳಿ ಬದುಕಬೇಕಿದ್ದ ಮಕ್ಕಳಿಬ್ಬರು ಸಾವನ್ನಪ್ಪಿರುವ ಮನಕಲುಕುವ ಘಟನೆ ನಡೆದಿದೆ.

ಹಾವು ಕಚ್ಚಿ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಚಿಕ್ಕಕಡಬೂರು ಗ್ರಾಮದಲ್ಲಿ ಜರುಗಿದೆ.

ಹಾವು ಕಚ್ಚಿ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಸಿಂಧನೂರು ತಾಲೂಕಿನ ಚಿಕ್ಕಕಡಬೂರು ಗ್ರಾಮದಲ್ಲಿ ಜರುಗಿದೆ. ಮೃತ ಮಕ್ಕಳನ್ನ ಕಾವ್ಯ ಅಂಬಣ್ಣ (9), ಮತ್ತು ಮಲ್ಲಪ್ಪ ಅಂಬಣ್ಣ (7) ಎಂದು ಗುರುತಿಸಲಾಗಿದೆ.

ಮನೆಯ ಮುಂದೆ ಮಲಗಿದ್ದ ವೇಳೆ ಬೆಳಗ್ಗೆ ಹಾವು ಕಚ್ಚಿ ಮಕ್ಕಳು ಸಾವನ್ನಪ್ಪಿದ್ದಾರೆ.

ತಕ್ಷಣಕ್ಕೆ ಆಸ್ಪತ್ರೆಗೆ ಮಕ್ಕಳನ್ನು ಕೊಂಡೊಯ್ಯಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದಾರೆ. ಮಕ್ಕಳನ್ನ ಕಳೆದುಕೊಂಡು ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಸಾಲು ಮರದ ತಿಮ್ಮಕ್ಕನ ಮಾತಿಗೆ ಸಿಎಂ ಮಾಡಿದ್ದೇನು?