Select Your Language

Notifications

webdunia
webdunia
webdunia
webdunia

ರಾಜ್ಯದ ಈ ಜಿಲ್ಲೆಯು ಕೊರೊನಾ ಮುಕ್ತವಾಗುವತ್ತ ಇಟ್ಟಿದೆ ಹೆಜ್ಜೆ

ರಾಜ್ಯದ ಈ ಜಿಲ್ಲೆಯು ಕೊರೊನಾ ಮುಕ್ತವಾಗುವತ್ತ ಇಟ್ಟಿದೆ ಹೆಜ್ಜೆ
ದಾವಣಗೆರೆ , ಬುಧವಾರ, 8 ಏಪ್ರಿಲ್ 2020 (17:19 IST)
ಕೊರೊನಾ ವೈರಸ್ ಮುಕ್ತ ಜಿಲ್ಲೆಯಾಗುವತ್ತ ರಾಜ್ಯದ ಈ ಜಿಲ್ಲೆಯು ಹೆಜ್ಜೆ ಇಟ್ಟಿದ್ದು ಜನತೆಯಲ್ಲಿ ಖುಷಿ ತರುತ್ತಿದೆ.

ದಾವಣಗೆರೆ ಜಿಲ್ಲೆಯಲ್ಲಿ ಕೊರೋನಾ ಮುಕ್ತ ಜಿಲ್ಲೆಯಾಗುವತ್ತ ಹೆಜ್ಜೆ ಇಟ್ಟಿದೆ. ಸೋಂಕು ದೃಢಪಟ್ಟಿದ್ದ ಮೂವರ ಪೈಕಿ ಇಬ್ಬರು ಗುಣಮುಖರಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಉಳಿದ ಒಬ್ಬರ ಗಂಟಲು ದ್ರವದ ಮಾದರಿ ಕೂಡ ನೆಗೆಟಿವ್ ಬಂದಿದ್ದು ಇಂದು ಅಥವಾ ನಾಳೆ ಬಿಡುಗಡೆ ಯಾಗುವ ಸಾಧ್ಯತೆಗಳಿವೆ.

ಈ ನಡುವೆ ಕಳೆದ 24 ಗಂಟೆಗಳ ಅವಧಿಯಲ್ಲಿ ‌ಲಾಕ್ ಡೌನ್ ಉಲ್ಲಂಘಿಸಿದ 489 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಲಾಕ್ ಡೌನ್ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಜಿಲ್ಲಾಡಳಿತದಿಂದ‌ ಅಗತ್ಯ ಸೇವೆಗಳ ಪಾಸ್ ಪಡೆದವರನ್ನು ಹೊರತು ಪಡಿಸಿ ಬೇರಾವುದೇ ವಾಹನಗಳ ಸಂಚಾರಕ್ಕೆ ಅನುಮತಿ ನೀಡುವುದಿಲ್ಲ ಎಂದು ಹನುಮಂತರಾಯ ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕ್ವಾರಂಟೈನ್ ಸೀಲ್ ಇದ್ರೂ ಓಡಾಡಿ ಭಯ ಹುಟ್ಟಿಸಿದ ಯುವಕ