Select Your Language

Notifications

webdunia
webdunia
webdunia
webdunia

ದೆಹಲಿ ನಿಜಾಮುದ್ದೀನ್ ಮಸೀದಿಯಿಂದ ಮಂಡ್ಯ ಜಿಲ್ಲೆಗೆ ವಕ್ಕರಿಸಿದ ಕೊರೊನಾ ವೈರಸ್

ದೆಹಲಿ ನಿಜಾಮುದ್ದೀನ್ ಮಸೀದಿಯಿಂದ ಮಂಡ್ಯ ಜಿಲ್ಲೆಗೆ ವಕ್ಕರಿಸಿದ ಕೊರೊನಾ ವೈರಸ್
ಮಂಡ್ಯ , ಮಂಗಳವಾರ, 7 ಏಪ್ರಿಲ್ 2020 (17:10 IST)
ಕೊರೊನಾ ವೈರಸ್ ಸೋಂಕಿತ ದೆಹಲಿಯ ನಿಜಾಮುದ್ದೀನ್ ಪ್ರಾರ್ಥನಾ ಸಭೆಯ ಲಿಂಕ್ ಮಂಡ್ಯ ಜಿಲ್ಲೆಯೊಂದಿಗೆ ಹರಡಿಕೊಂಡಿದ್ದು, ಇದೀಗ ಆ ಮೂಲಕ ಕೊರೊನಾ ವೈರಸ್ ವಕ್ಕರಿಸಿದೆ.

ನಿಜಾಮುದ್ದೀನ್ ಪ್ರಾರ್ಥನಾ ಸಭೆಯ ಐವರು ಧರ್ಮಗುರುಗಳ  ಸಂಪರ್ಕದಲ್ಲಿದ್ದ  ಮಂಡ್ಯ ಜಿಲ್ಲೆಯ ಮಳವಳ್ಳಿಯ ಮೂವರು ವ್ಯಕ್ತಿಗಳಿಗೆ ಕೊರೊನಾ ವೈರಸ್ ಹರಡಿರುವುದು ದೃಢಪಟ್ಟಿದೆ.  ಮೂವರೂ ಸೋಂಕಿತರಿಗೂ ಮಂಡ್ಯ ಮಿಮ್ಸ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.   ಕೊರೊನಾ ಪೀಡಿತ ಸಂಖ್ಯೆ 134, 135, 136, 137 ಮತ್ತು 138 ವ್ಯಕ್ತಿಗಳೊಂದಿಗೆ ಈ ಮೂವರು ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಕೊರೊನಾ ಪತ್ತೆಯಾಗಿದೆ.   

ಮಂಡ್ಯ ಜಿಲ್ಲೆಯಲ್ಲಿ  ಕೊರೊನಾ ವೈರಸ್ ಶಂಕಿತರ ಪೈಕಿ ಇನ್ನೂ 7 ಮಂದಿಯ ವರದಿ ಬರಬೇಕಾಗಿದೆ. ಧರ್ಮಗುರುಗಳ ಜೊತೆ ಒಟ್ಟು 10 ಮಂದಿ ಸಂಪರ್ಕ ಹೊಂದಿದ್ದು, ಇವರ ಜೊತೆಗೆ ಸಂಪರ್ಕ ಹೊಂದಿದ್ದ 48 ಮಂದಿಯನ್ನು ಐಸೊಲೇಷನ್ ವಾರ್ಡ್​ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.  



Share this Story:

Follow Webdunia kannada

ಮುಂದಿನ ಸುದ್ದಿ

ಬೇಕರಿ, ಚಿಕನ್, ಮೀನು, ಮಟನ್ ಶಾಪ್ ಮತ್ತೆ ಶುರು