Select Your Language

Notifications

webdunia
webdunia
webdunia
webdunia

ಗೆಳೆಯನ ಹೆಂಡತಿಯನ್ನು ಹಾರಿಸಿಕೊಂಡು ಹೋದವನ ಕಥೆ ಹೀಗೆ ಆಗೋದಾ

ಗೆಳೆಯನ ಹೆಂಡತಿಯನ್ನು ಹಾರಿಸಿಕೊಂಡು ಹೋದವನ ಕಥೆ ಹೀಗೆ ಆಗೋದಾ
ಬೆಂಗಳೂರು , ಗುರುವಾರ, 17 ಅಕ್ಟೋಬರ್ 2019 (15:38 IST)

ಅಸಲಿಗೆ ಅವರಿಬ್ಬರೂ ಗೆಳೆಯರು. ಆದರೆ ಗೆಳೆಯನ ಹೆಂಡತಿ ಮೇಲೆ ಕಣ್ಣು ಹಾಕಿದವನು ಮಾಡಬಾರದ್ದನ್ನು ಮಾಡಿದ್ದಾನೆ.

ತಿಮ್ಮೇಗೌಡ, ಮಣಿಕಂಠ ಇಬ್ರೂ ಸ್ನೇಹಿತರಾಗಿದ್ದರು. ಆದರೆ ಮಣಿಕಂಠನ ಹೆಂಡತಿ ರಮ್ಯಾ ಮೇಲೆ ಕಣ್ಣು ಹಾಕಿದ್ದ ತಿಮ್ಮೇಗೌಡ ಅವಳ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡು ಓಡಿಸಿಕೊಂಡು ಹೋಗಿದ್ದಾನೆ.

ಗಂಡ, ಮಗುವನ್ನು ಬಿಟ್ಟು ತಿಮ್ಮೇಗೌಡನ ಜೊತೆ ರಮ್ಯಾ ಬಂದಿದ್ದಳು. ಆದರೆ ಎರಡು ತಿಂಗಳು ಅವಳನ್ನು ಹುರಿದು ಮುಕ್ಕಿದ ತಿಮ್ಮೇಗೌಡ ನಂತರ ಅವಳೊಂದಿಗೆ ಕ್ಯಾತೆ ಶುರುವಿಟ್ಟುಕೊಂಡಿದ್ದಾನೆ.

ಹೀಗಾಗಿ ತಿಮ್ಮೇಗೌಡನಿಂದ ರಮ್ಯಾ ದೂರ ಆಗಿದ್ದಾಳೆ.

ಆದರೆ ರಮ್ಯಾ ತನ್ನ ಬಿಟ್ಟು ಹೋಗಿದ್ದೇ ತಡ, ಅವಳ ಗಂಡನಾಗಿರೋ ಮಣಿಕಂಠನಿಗೆ ಫೋನ್ ಮಾಡಿ ತಿಮ್ಮೇಗೌಡ ಅವಾಜ್ ಹಾಕತೊಡಗಿದ್ದಾನೆ.

ಹೀಗಾಗಿ ರೊಚ್ಚಿಗೆದ್ದ ಮಣಿಕಂಠನು ತನ್ನ ಹೆಂಡತಿಯನ್ನು ಓಡಿಸಿಕೊಂಡು ಹೋಗಿದ್ದ ತಿಮ್ಮೇಗೌಡನ ಕೊಲೆ ಮಾಡಿದ್ದಾನೆ. ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಘಟನೆ ನಡೆದಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಬಸನಗೌಡ ಪಾಟೀಲ್ ಯತ್ನಾಳ್ ಗೆ ದುರಹಂಕಾರಿ ಎಂದ್ರಾ ನಳಿನ್ ಕುಮಾರ್ ಕಟೀಲ್ ?