Select Your Language

Notifications

webdunia
webdunia
webdunia
webdunia

ಅನರ್ಹರನ್ನು ಸೋಲಿಸುವುದೇ ಕಾಂಗ್ರೆಸ್, ಜೆಡಿಎಸ್ ಉದ್ದೇಶ- ಸಿದ್ದರಾಮಯ್ಯ

ಅನರ್ಹರನ್ನು ಸೋಲಿಸುವುದೇ ಕಾಂಗ್ರೆಸ್, ಜೆಡಿಎಸ್ ಉದ್ದೇಶ- ಸಿದ್ದರಾಮಯ್ಯ
ಮೈಸೂರು , ಬುಧವಾರ, 20 ನವೆಂಬರ್ 2019 (10:47 IST)
ಮೈಸೂರು : ಅನರ್ಹರನ್ನು ಸೋಲಿಸುವುದೇ ಕಾಂಗ್ರೆಸ್, ಜೆಡಿಎಸ್ ಉದ್ದೇಶ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.




ಈ ಬಗ್ಗೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಮ್ಮ ಉದ್ದೇಶ ಅನರ್ಹ ಶಾಸಕರು ಸೋಲಬೇಕೆಂಬುವುದು. ಈ ಮೂಲಕ ರಾಜ್ಯಾದ್ಯಂತ ಸಂದೇಶ ರವಾನೆಯಾಗಬೇಕು. ರಾಜ್ಯದಲ್ಲಿ ಮೈತ್ರಿ ಸರ್ಕಾರ ಬೀಳಲು ಅನರ್ಹ ಶಾಸಕರು ಕಾರಣ. ಹೀಗಾಗಿ ಅನರ್ಹ ಶಾಸಕರು ಸೋಲಬೇಕು ಎಂದು ಹೇಳಿದ್ದಾರೆ.


ಅಲ್ಲದೇ ಜೆಡಿಎಸ್ ಜೊತೆ ಮುರಿದುಕೊಂಡಿದ್ದರೂ ಕೂಡ ಈ ವಿಚಾರವಾಗಿ ಕಾಂಗ್ರೆಸ್, ಜೆಡಿಎಸ್, ಉದ್ದೇಶ ಒಂದೇ. ಆದರೆ ಅವರ ದಾರಿ ಬೇರೆ, ನಮ್ಮ ದಾರಿ ಬೇರೆ ಎಂದು ಅವರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಂಡ್ಯದಲ್ಲಿ ಸುಮಲತಾ ಸಹಕಾರ ನಮಗೆ ಸಿಗುತ್ತೆ- ಸಿಎಂ ಬಿಎಸ್ ವೈ ವಿಶ್ವಾಸ