Select Your Language

Notifications

webdunia
webdunia
webdunia
webdunia

ದೇವೇಗೌಡರ ಕುಟುಂಬವನ್ನು ಹೊಗಳುವ ಭರದಲ್ಲಿ ಎಡವಟ್ಟು ಹೇಳಿಕೆ ನೀಡಿದ ಸಚಿವ

ದೇವೇಗೌಡರ ಕುಟುಂಬವನ್ನು ಹೊಗಳುವ ಭರದಲ್ಲಿ ಎಡವಟ್ಟು ಹೇಳಿಕೆ ನೀಡಿದ ಸಚಿವ
ತುಮಕೂರು , ಶುಕ್ರವಾರ, 22 ಮಾರ್ಚ್ 2019 (09:17 IST)
ತುಮಕೂರು : ಜೆಡಿಎಸ್ ವರಿಷ್ಠ ಎಚ್‍.ಡಿ ದೇವೇಗೌಡರು ಚುನಾವಣೆ ಸ್ಪರ್ಧಿಸುವ ವಿಚಾರದ ಕುರಿತು ಮಾತನಾಡುವಾಗ ಸಣ್ಣ ಕೈಗಾರಿಕಾ ಸಚಿವ ಎಸ್‍.ಆರ್. ಶ್ರೀನಿವಾಸ್  ಅವರು ದೇವೇಗೌಡರ ಕುಟುಂಬವನ್ನು ಹೊಗಳುವ ಭರದಲ್ಲಿ ಎಡವಟ್ಟು ಹೇಳಿಕೆಯೊಂದನ್ನು ನೀಡಿದ್ದಾರೆ.


ಮೈತ್ರಿಗಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿ ಒಮ್ಮತ ಮೂಡದ ಪರಿಣಾಮ ಇಂದು ಕಾಂಗ್ರೆಸ್ ನಾಯಕರ ಬೆಂಬಲ ಕೋರಿ ಸಚಿವ ಶ್ರೀನಿವಾಸ್ ಮಾಜಿ ಕಾಂಗ್ರೆಸ್ ಶಾಸಕರಾದ ರಫಿಕ್ ಅಹಮದ್ ಅವರ ಮನೆಗೆ ಭೇಟಿ ನೀಡಿ ಸಭೆ ನಡೆಸಿದ್ದರು. ಆ ವೇಳೆ ಬೆಂಗಳೂರು ಉತ್ತರದಲ್ಲಿ ಸೋಲುವ ಭೀತಿಯಿಂದ ತುಮಕೂರಿನಿಂದ ಸ್ಪರ್ಧೆ ಮಾಡುತ್ತಾ ಇದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಎಸ್‍.ಆರ್ ಶ್ರೀನಿವಾಸ್  ಅವರು,’ ದೇವೇಗೌಡರ ಕುಟುಂಬ ರಾಕ್ಷಸ ಕುಟುಂಬ. ಅವರು ಯಾವುದಕ್ಕೂ ಅಂಜುವವರಲ್ಲ. ಸೋಲಲಿ-ಗೆಲ್ಲಲಿ ಹೋರಾಟ ಮಾಡೇ ಮಾಡುತ್ತಾರೆ ಎಂದು ದೊಡ್ಡಗೌಡರ ಕುಟುಂಬ ಹೊಗಳಲು ಹೋಗಿ ಎಡವಟ್ಟು ಮಾಡಿದ್ದಾರೆ.


ದೇವೇಗೌಡರು 60 ವರ್ಷದ ರಾಜಕೀಯ ಜೀವನದಲ್ಲಿ ಸಾಕಷ್ಟು ಏಳು ಬೀಳು ಕಂಡಿದ್ದಾರೆ. ಈ ಬಾರಿ ಅವರು ಎಲ್ಲಿ ಸ್ಪರ್ಧಿಸಿದರೂ ಗೆಲ್ಲುತ್ತಾರೆ. ಮಾಜಿ ಪ್ರಧಾನಿ ದೇವೇಗೌಡರು ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಒತ್ತಡ ಹಾಕಿದ್ದೇವೆ. ನಮ್ಮ ಪಕ್ಷದಿಂದ ದೇವೇಗೌಡರೆ ಅಭ್ಯರ್ಥಿಯಾಗಿದ್ದು, 25 ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಸರ್ಕಾರವು ಮತಕ್ಕಾಗಿ ಯೋಧರನ್ನು ಬಲಿ ತೆಗೆದುಕೊಂಡಿದೆ- ರಾಮ್ ಗೋಪಾಲ್ ಯಾದವ್ ರಿಂದ ವಿವಾದಾತ್ಮಕ ಹೇಳಿಕೆ