Publish Date: Sat, 16 Mar 2019 (16:37 IST)
Updated Date: Sat, 16 Mar 2019 (16:39 IST)
ಚುನಾವಣೆ ಕಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಮಹತ್ವದ ಕ್ಷೇತ್ರದಲ್ಲಿ ಜೆಡಿಎಸ್ ವಿರುದ್ಧ ಕಾಂಗ್ರೆಸ್ ನಾಯಕರು ತಿರುಗಿ ಬಿದ್ದು ಪ್ರತಿಭಟನೆ ನಡೆಸಿದ್ದಾರೆ.
ಸಂಸದ ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಜೆಡಿಎಸ್ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ. ತುಮಕೂರು ನಗರದ ಟೌನ್ ಹಾಲ್ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ತುಮಕೂರು ಕ್ಷೇತ್ರವನ್ನ ಕಾಂಗ್ರೆಸ್ ಬಿಟ್ಟು ಕೊಡುವಂತೆ ಆಗ್ರಹ ಮಾಡಿದ ಧರಣಿ ನಿರತರು, ಮುದ್ದಹನುಮೇಗೌಡರಿಗೆ ಟಿಕೆಟ್ ನೀಡುವಂತೆ ಒತ್ತಾಯ ಮಾಡಿದ್ರು.
ತುಮಕೂರಿಗೆ ರಾಹುಲ್ ಗಾಂಧಿ ಬಂದರೆ ಸ್ವಾಗತ ಕೋರಲಾಗುವುದು. ನಮ್ಮ ಜಿಲ್ಲೆಯಲ್ಲಿ ಜೆಡಿಎಸ್ ಇಲ್ಲಾ. ಕಾಂಗ್ರೆಸ್ ಮಾತ್ರ ಇರೋದು ಎಂದ್ರು.
ಜೆಡಿಎಸ್ ನವರು 8 ಕ್ಷೇತ್ರ ಕೇಳಿದ್ದಾರೆ. ಅವರು 7 ಕೊಟ್ರು ತಗೊತ್ತಾರೆ. 5 ಕೊಡ್ರಿ ತಗೋತಾರೆ. ಅವರಿಗೆ ಬೇಕಿರೋದು ಅಪ್ಪ ಮಕ್ಕಳು, ಮೊಮ್ಮಕ್ಕಳಿಗೆ. ಅವರ ಕುಟುಂಬಕ್ಕೆ ಕೊಟ್ಟಿರೋದು ಸಾಕು, ಮುದ್ದಹನುಮೇಗೌಡರಿಗೆ ಟಿಕೆಟ್ ಕೊಡಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ತುಮಕೂರನ್ನ ಜೆಡಿಎಸ್ ಗೆ ಬಿಟ್ಟು ಕೊಡು ಅನ್ನೋದು ಯಾವ ನ್ಯಾಯ? ಎಲ್ಲವೂ ಜೆಡಿಎಸ್ ಗೆ ಇರಬೇಕಾ..? ಜೆಡಿಎಸ್ ಗೆ ಕೊಟ್ರೆ ನಾವು ಗೆಲ್ಲಿಸೋದಿಲ್ಲಾ. ಕಾಂಗ್ರೆಸ್ ಗೆಲ್ಲಿಸ್ತೀವಿ ಎಂದು ಹೇಳಿದ್ದಾರೆ.