Select Your Language

Notifications

webdunia
webdunia
webdunia
webdunia

ಕಲ್ಪತರು ನಾಡಲ್ಲಿ ಬಿಜೆಪಿ ಟಿಕೆಟ್ ಗಾಗಿ ಭಾರಿ ಲಾಬಿ

ಕಲ್ಪತರು ನಾಡಲ್ಲಿ ಬಿಜೆಪಿ ಟಿಕೆಟ್ ಗಾಗಿ ಭಾರಿ ಲಾಬಿ
ತುಮಕೂರು , ಗುರುವಾರ, 14 ಮಾರ್ಚ್ 2019 (13:09 IST)
ಕಲ್ಪತರು ನಾಡಲ್ಲಿ ಬಿಜೆಪಿ ಟಿಕೆಟ್ ಗಾಗಿ ಭಾರಿ ಲಾಬಿ ಶುರುವಾಗಿದೆ.

ದೆಹಲಿ ನಾಯಕರ ಮನೆ ಬಾಗಿಲು ಬಡಿಯುತ್ತಿರುವ ಮತ್ತೊರ್ವ ಟಿಕೆಟ್ ಆಕಾಂಕ್ಷಿ ಗಮನ ಸೆಳೆದಿದ್ದಾರೆ. ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಅವಿನಾಶ್ ರೈ ಕನ್ನಾ ಸೇರಿ ಹಲವರ ಭೇಟಿ ಮಾಡಲಾಗಿದೆ. ತಿಪಟೂರು ಶಾಂತಕುಮಾರ್ ರಿಂದ ಟಿಕೆಟ್ ಪಡೆಯಲು ಕಸರತ್ತು ಆರಂಭಗೊಂಡಿದೆ.

ದೆಹಲಿ ಮಟ್ಟದಲ್ಲಿ ಟಿಕೆಟ್ ಲಾಬಿಗಿಳಿದ ಶಾಂತಕುಮಾರ್, ತಮ್ಮದೇ ಸ್ಟೈಲ್ ನಲ್ಲಿ ಟಿಕೆಟ್ ಪಡೆಯಲು ಯತ್ನ ಮುಂದುವರಿಸಿದ್ದಾರೆ.
ದೆಹಲಿ ನಾಯಕರ ಭೇಟಿಯ ಫೋಟೊ ಹರಿಬಿಟ್ಟ ಶಾಂತಕುಮಾರ್ ರಾಜಕೀಯ ಚರ್ಚೆಗೆ ಕಾರಣವಾಗಿದ್ದಾರೆ.

ಮಾಜಿ ಸಂಸದ ಜಿ.ಎಸ್ ಬಸವರಾಜ್ ಗೆ ಟಕ್ಕರ್ ನೀಡಲು ಮುಂದಾದ ಟಿಕೆಟ್ ಆಕಾಂಕ್ಷಿ ಇವರಾಗಿದ್ದಾರೆ. ತೀವ್ರ ಕುತೂಹಲ ಕೆರಳಿಸಿದ ಶಾಂತಕುಮಾರ್ ನಡೆ ಬಿಜೆಪಿ ವಲಯದಲ್ಲಿ ಗುಸು ಗುಸು ಚರ್ಚೆಗೆ ಕಾರಣವಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆಯಲ್ಲಿ 3 ಕ್ಕಿಂತ ಹೆಚ್ಚು ಕ್ಷೇತ್ರದಲ್ಲಿ ಜೆಡಿಎಸ್ ಗೆದ್ದರೆ ರಾಜಕೀಯ ನಿವೃತ್ತಿ- ಶಾಸಕ ಕೆ.ಎನ್.ರಾಜಣ್ಣ ಸವಾಲು