Select Your Language

Notifications

webdunia
webdunia
webdunia
webdunia

ಕ್ಷೇತ್ರ ತಪ್ಪಿಸುವುದರಿಂದ ಯಾರೋ ಒಬ್ಬರಿಗೆ ಸ್ಕೋರ್ ಹೆಚ್ಚಾಗುವುದಿಲ್ಲ ಎಂದು ಡಿಸಿಎಂ ಹೇಳಿದ್ದು ಯಾರಿಗೆ ಗೊತ್ತಾ?

ಕ್ಷೇತ್ರ ತಪ್ಪಿಸುವುದರಿಂದ ಯಾರೋ ಒಬ್ಬರಿಗೆ ಸ್ಕೋರ್ ಹೆಚ್ಚಾಗುವುದಿಲ್ಲ ಎಂದು ಡಿಸಿಎಂ ಹೇಳಿದ್ದು ಯಾರಿಗೆ ಗೊತ್ತಾ?
ಬೆಂಗಳೂರು , ಸೋಮವಾರ, 18 ಮಾರ್ಚ್ 2019 (13:41 IST)
ಬೆಂಗಳೂರು : ತುಮಕೂರು ಕ್ಷೇತ್ರ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿದ್ದ ಡಿಸಿಎಂ ಡಾ.ಜಿ. ಪರಮೇಶ್ವರ ಅವರು ಕ್ಷೇತ್ರ ತಪ್ಪಿಸುವುದರಿಂದ ಯಾರೋ ಒಬ್ಬರಿಗೆ ಸ್ಕೋರ್ ಹೆಚ್ಚಾಗುವುದಿಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟಿದ್ದಾರೆ.


‘ಕಾಂಗ್ರೆಸ್ ಸಂಸದರು ಪ್ರತಿನಿಧಿಸುತ್ತಿದ್ದ ತುಮಕೂರು ಕ್ಷೇತ್ರವನ್ನು ಕ್ಷೇತ್ರ ಹಂಚಿಕೆ ಸಂದರ್ಭದಲ್ಲಿ ಜೆಡಿಎಸ್ ಗೆ ಬಿಟ್ಟು ಕೊಟ್ಟಾಗ ನನಗೆ ಆತಂಕ, ಅಸಮಾಧಾನ ಆಗಿದ್ದು ನಿಜ. ಆದರೆ ಉದ್ದೇಶಪೂರ್ವಕವಾಗಿ ಕ್ಷೇತ್ರ ಕೈ ತಪ್ಪಿದೆ ಎಂದು ಅನಿಸುತ್ತಿಲ್ಲ’ ಎಂದು ಹೇಳಿದ್ದಾರೆ.


 ಅಲ್ಲದೇ ತುಮಕೂರು ಕ್ಷೇತ್ರ ನಮ್ಮ ಬಳಿ ಉಳಿಯುವ ನಿರೀಕ್ಷೆಯಿತ್ತು. ಹೈಕಮಾಂಡ್ ಜೊತೆ ಚರ್ಚೆ ನಡೆಸುತ್ತೇನೆ. ದೇವೇಗೌಡರು ಸ್ಪರ್ಧಿಸದಿದ್ದರೆ ತುಮಕೂರು ಕ್ಷೇತ್ರವನ್ನು ವಾಪಸ್ ಕೊಡುವಂತೆ ಕೇಳಿದ್ದೇನೆ ಎಂದು ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಲುಮರದ ತಿಮ್ಮಕ್ಕಗೆ ಅಭಿನಂದಿಸಿದ ಪರಮೇಶ್ವರ