Select Your Language

Notifications

webdunia
webdunia
webdunia
webdunia

ಶಾಸಕರ ಕಿಡ್ನಾಪ್ ನಡೆಯುತ್ತಿದೆ ಎಂದ ಸಚಿವ

ಶಾಸಕರ ಕಿಡ್ನಾಪ್ ನಡೆಯುತ್ತಿದೆ ಎಂದ ಸಚಿವ
ಬೆಂಗಳೂರು , ಸೋಮವಾರ, 8 ಜುಲೈ 2019 (15:01 IST)
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ಹಾರುತ್ತಿರುವ ಶಾಸಕರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಹೀಗಾಗಿ ಶಾಸಕರನ್ನ ಕಿಡ್ನಾಪ್ ಮಾಡಿ ಮುಂಬೈಗೆ ಕಳಿಸಲಾಗುತ್ತಿದೆ ಎಂದು ಪ್ರಭಾವಿ ಸಚಿವರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.

ಶಾಸಕ ನಾಗೇಶ್ ರನ್ನ ರಾಜೀನಾಮೆ ಕೊಡಿಸುವುದಕ್ಕೂ ಮೊದಲು ಕಿಡ್ನಾಪ್ ಮಾಡಲಾಗಿತ್ತು. ಹೀಗಂತ ಸಚಿವ ಡಿ.ಕೆ.ಶಿವಕುಮಾರ್ ಆರೋಪ ಮಾಡಿದ್ದಾರೆ.

ಶಾಸಕ ನಾಗೇಶ್ ಬೇರೆಯವರ ಫೋನಿಂದ ನನ್ ಜೊತೆ ಮಾತನಾಡಿದ್ರು. ಯಡಿಯೂರಪ್ಪರ ಪಿಎ ಸಂತೋಷ್ ಮತ್ತು ಕೆಲ ಜನರನ್ನು ಕಳುಹಿಸಿ ನನ್ನನ್ನು ಕಿಡ್ನಾಪ್ ಮಾಡಿದ್ದಾರೆ. ರಾಜೀನಾಮೆ ಕೊಡಿಸಿ ಮುಂಬೈಗೆ ಕರೆದುಕೊಂಡು ಹೊರಟಿದ್ದಾರೆ. ಬೇಗ ಬನ್ನಿ ಎಂದಿದ್ದರು ಎಂದ್ರು.

ನಾನು, ನಾರಾಯಣ ಸ್ವಾಮಿ ಹಾಗೂ ವಿ.ಮುನಿಯಪ್ಪ ಬರುವ ಮೊದಲೇ ವಿಮಾನ ಟೇಕ್ ಆಫ್ ಮಾಡಿಸಿದ್ರು. ನಿಗದಿತ ಸಮಯಕ್ಕಿಂತ ಮೊದಲೇ ವಿಮಾನ ಟೇಕ್ ಆಫ್ ಮಾಡಿಸಿದ್ದಾರೆ.

ಬಿಜೆಪಿಯವರು ಏನೇ ಮಾಡಿದರೂ ನಾವು ಮೈತ್ರಿ ಸರಕಾರವನ್ನು ಉಳಿಸಿಕೊಳ್ಳುತ್ತೇವೆ. ಹೀಗಂತ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

‘ಬಿಜೆಪಿ ಕುದುರೆ ವ್ಯಾಪಾರ ನಡೆಸೋಕೆ ಬಿಡೋಲ್ಲ ಎಂದ ಸಿದ್ದರಾಮಯ್ಯ’