Select Your Language

Notifications

webdunia
webdunia
webdunia
webdunia

ಅತೃಪ್ತ ಜೆಡಿಎಸ್ ಶಾಸಕರ ಬಂಡಾಯ ಶಮನಕ್ಕೆ ಸಿಎಂ ಕುಮಾರಸ್ವಾಮಿಯಿಂದ ಮಾಸ್ಟರ್ ಪ್ಲ್ಯಾನ್

ಅತೃಪ್ತ ಜೆಡಿಎಸ್ ಶಾಸಕರ ಬಂಡಾಯ ಶಮನಕ್ಕೆ  ಸಿಎಂ ಕುಮಾರಸ್ವಾಮಿಯಿಂದ ಮಾಸ್ಟರ್ ಪ್ಲ್ಯಾನ್
ಬೆಂಗಳೂರು , ಸೋಮವಾರ, 8 ಜುಲೈ 2019 (10:21 IST)
ಬೆಂಗಳೂರು : ಕಾಂಗ್ರೆಸ್ ಶಾಸಕರ ಜೊತೆ ಮೂವರು ಜೆಡಿಎಸ್ ಶಾಸಕರು ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ಅತೃಪ್ತ ಜೆಡಿಎಸ್ ಶಾಸಕರ ಬಂಡಾಯ ಶಮನಕ್ಕೆ  ಸಿಎಂ ಕುಮಾರಸ್ವಾಮಿ ಮಾಸ್ಟರ್ ಪ್ಲ್ಯಾನ್ ವೊಂದನ್ನು ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.




ಜೆಡಿಎಸ್ ನ  ಕೆಲ ನಾಯಕರು ಬಿಜೆಪಿ ಸಂರ್ಕದಲ್ಲಿರುವ ಹಿನ್ನಲೆ ಹಾಗೂ  ಜೆಡಿಎಸ್ ನಲ್ಲಿರುವ ಭಿನ್ನಾಭಿಪ್ರಾಯ ಶಮನ ಮಾಡಲು ಸಿಎಂ ನಿರ್ಧಾರ ಮಾಡಿದ್ದು, ಅದಕ್ಕಾಗಿ ಜೆಡಿಎಸ್ ನ ಎಲ್ಲಾ ಸಚಿವರುಗಳಿಂದ ರಾಜೀನಾಮೆ ಸಾಧ್ಯತೆ ಇದೆ ಎನ್ನಲಾಗಿದೆ.


ಈ ಹೊಸ ತಂತ್ರದ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರೊಂದಿಗೆ ನಿನ್ನೆ ನಡೆದ ಜೆಡಿಎಲ್ ಪಿ ಸಭೆಯಲ್ಲಿ ಚರ್ಚೆ ನಡೆಸಿದ್ದು, ಈ ಹಿನ್ನಲೆಯಲ್ಲಿ ಮುಂಬೈನಲ್ಲಿರುವ ಅತೃಪ್ತ ಜೆಡಿಎಸ್ ಶಾಸಕರ ಮನವೊಲಿಸಿ ಕರೆತರಲು ಇಂದು ಮೂವರು ಸಚಿವರಾದ ಹೆಚ್.ಡಿ.ರೇವಣ್ಣ, ಶಾ.ರಾ.ಮಹೇಶ್ ಹಾಗೂ ಸಿ.ಎಸ್.ಪುಟ್ಟರಾಜು ಅವರನ್ನು ಮುಂಬೈಗೆ ಕಳುಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ನೀವೊಬ್ಬ ಪರಿಪೂರ್ಣ ನಟ – ಸಿದ್ದರಾಮಯ್ಯರ ಕಾಲೆಳೆದ ಶೋಭಾ ಕರಂದ್ಲಾಜೆ