Select Your Language

Notifications

webdunia
webdunia
webdunia
webdunia

ನೀವೊಬ್ಬ ಪರಿಪೂರ್ಣ ನಟ – ಸಿದ್ದರಾಮಯ್ಯರ ಕಾಲೆಳೆದ ಶೋಭಾ ಕರಂದ್ಲಾಜೆ

ನೀವೊಬ್ಬ ಪರಿಪೂರ್ಣ ನಟ – ಸಿದ್ದರಾಮಯ್ಯರ ಕಾಲೆಳೆದ ಶೋಭಾ ಕರಂದ್ಲಾಜೆ
ಬೆಂಗಳೂರು , ಸೋಮವಾರ, 8 ಜುಲೈ 2019 (09:59 IST)
ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಅವರು ಒಬ್ಬ ಪರಿಪೂರ್ಣ ನಟ ಎಂದು ಸಂಸದೆ ಶೋಭಾ ಕರಂದ್ಲಾಜೆ ಟ್ವೀಟರ್ ನಲ್ಲಿ ವ್ಯಂಗ್ಯ ವಾಡಿದ್ದಾರೆ.




ಸಿದ್ದರಾಮಯ್ಯ ಅವರು,’ಮೈತ್ರಿ ಸರ್ಕಾರ, ಮುಖ್ಯಮಂತ್ರಿ ಇಲ್ಲವೇ ದೇವೇಗೌಡರ ವಿರುದ್ಧ ಯಾರೂ ಮಾತನಾಡಬಾರದೆಂದು ನಮ್ಮ ಪಕ್ಷದ ನಾಯಕರು, ಕಾರ್ಯಕರ್ತರಲ್ಲಿ ಮನವಿ ಮಾಡುತ್ತಿದ್ದೇನೆ. ಮೈತ್ರಿ ಭಂಗಕ್ಕಾಗಿ ವಿರೋಧಿಗಳು ಹುಟ್ಟುಹಾಕುತ್ತಿರುವ ಜಗಳದ ಗಾಳಿ ಸುದ್ದಿಗಳ ಬಗ್ಗೆ ಎಚ್ಚರಕೆಯಿಂದಿರಿ’ ಎಂದು ಟ್ವೀಟ್ ಮಾಡಿದ್ದಾರೆ.


ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ ಸಂಸದೆ ಶೋಭಾ ಕರಂದ್ಲಾಜೆ, ‘ರಾಜ್ಯ ಸರಕಾರದ ಪತನಕ್ಕೆ ಬಾಹ್ಯ ಪ್ರಚೋದನೆಯನ್ನು ನೀಡುತ್ತಾ, ಅದೇ ಸಮಯದಲ್ಲಿ ವಿರೋಧ ಪಕ್ಷವನ್ನು ದೂಷಣೆ ಮಾಡುವ ಪ್ರಹಸನವನ್ನು ತುಂಬಾ ಯಶಸ್ವಿಯಾಗಿ ಮಾಡುತ್ತಿದ್ದೀರಿ ಸಿದ್ದರಾಮಯ್ಯನವರೇ.. ನೀವೊಬ್ಬ ಪರಿಪೂರ್ಣ ನಟ” ಎಂದು  ಸಿದ್ದರಾಮಯ್ಯ ಅವರ ವಿರುದ್ಧ ಕಿಡಿಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜೀನಾಮೆ ನೀಡಿದ ಜೆಡಿಎಸ್ ಶಾಸಕರ ಮೇಲೆ ಸಿಎಂ ಗರಂ