Select Your Language

Notifications

webdunia
webdunia
webdunia
webdunia

ಮೈತ್ರಿ ಸರಕಾರದ ಸಚಿವರಿಂದ ರಾಜೀನಾಮೆ: ಪ್ಲಾನ್ ಮೊರೆ ಹೋದ ದೋಸ್ತಿಗಳು

ಮೈತ್ರಿ ಸರಕಾರದ ಸಚಿವರಿಂದ ರಾಜೀನಾಮೆ: ಪ್ಲಾನ್ ಮೊರೆ ಹೋದ ದೋಸ್ತಿಗಳು
ಬೆಂಗಳೂರು , ಸೋಮವಾರ, 8 ಜುಲೈ 2019 (14:34 IST)
ಹೇಗಾದರೂ ಮಾಡಿ ಮೈತ್ರಿ ಸರಕಾರವನ್ನು ಉಳಿಸಿಕೊಳ್ಳಬೇಕೆಂದು ಪಣ ತೊಟ್ಟಿರುವ ದೋಸ್ತಿ ಪಕ್ಷಗಳು ಇದೀಗ ತಮ್ಮ ತಮ್ಮ ಸಚಿವರಿಂದ ರಾಜೀನಾಮೆ ಕೊಡಿಸಿದ್ದಾರೆ. ಆ ಮೂಲಕ ಪ್ಲಾನ್ ಗೆ ಮೊರೆ ಹೋಗಿದ್ದಾರೆ.

ರಾಜ್ಯ ರಾಜಕೀಯದಲ್ಲಿ ಹೈಡ್ರಾಮ ಮುಂದುವರಿದಿದ್ದು, 14 ಶಾಸಕರ ರಾಜೀನಾಮೆ ಬೆನ್ನಲ್ಲೆ ಇದೀಗ ಕಾಂಗ್ರೆಸ್ ನ 19 ಸಚಿವರು ರಾಜೀನಾಮೆ ನೀಡಿದ್ದಾರೆ.

ಮೈತ್ರಿ ಸರಕಾರದ ಸಮನ್ವಯ ಸಮಿತಿ ನಾಯಕ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಪಕ್ಷದ ಎಲ್ಲ ಸಚಿವರು ರಾಜೀನಾಮೆ ನೀಡಿದ್ದಾರೆ.

ಇದೇ ವೇಳೆ ಜೆಡಿಎಸ್ ಕೂಡ ತನ್ನ ಸಚಿವರಿಂದ ರಾಜೀನಾಮೆ ಪಡೆಯೋದಕ್ಕೆ ಮುಂದಾಗಿದೆ. ದೋಸ್ತಿ ಪಕ್ಷಗಳ ಸಚಿವ ಸ್ಥಾನದ ಆಫರ್ ನ್ನು ಅತೃಪ್ತ ಶಾಸಕರಿಗೆ ನೀಡಲು ಚಿಂತನೆ ನಡೆಸಲಾಗುತ್ತಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಮೈತ್ರಿಸರ್ಕಾರಕ್ಕೆ ಬಿಗ್ ಶಾಕ್; ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಪಕ್ಷೇತರ ಶಾಸಕ ಹೆಚ್. ನಾಗೇಶ್