Select Your Language

Notifications

webdunia
webdunia
webdunia
webdunia

ದೇವೇಗೌಡರ ಕುಟುಂಬದವರು ರಾಜಕೀಯ ಸನ್ಯಾಸ ಪಡೆದರೆ ಇಡೀ ರಾಜ್ಯಕ್ಕೆ ಒಳ್ಳೆಯದು ಎಂದ ಬಿಜೆಪಿ ನಾಯಕಿ

ದೇವೇಗೌಡರ ಕುಟುಂಬದವರು ರಾಜಕೀಯ ಸನ್ಯಾಸ ಪಡೆದರೆ ಇಡೀ ರಾಜ್ಯಕ್ಕೆ ಒಳ್ಳೆಯದು ಎಂದ ಬಿಜೆಪಿ ನಾಯಕಿ
ಉಡುಪಿ , ಸೋಮವಾರ, 3 ಜೂನ್ 2019 (14:10 IST)
ಉಡುಪಿ : ದೇವೇಗೌಡರ ಕುಟುಂಬದವರು ರಾಜಕೀಯ ಸನ್ಯಾಸ ಪಡೆದರೆ ಇಡಿ ರಾಜ್ಯಕ್ಕೆ ಒಳ್ಳೆಯದು ಎಂದು  ಸಂಸದೆ ಶೋಭಾ ಕರಂದ್ಲಾಜೆ ಲೇವಡಿ ಮಾಡಿದ್ದಾರೆ.




ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದ್ರೆ ರೇವಣ್ಣ ರಾಜಕೀಯ ಸನ್ಯಾಸ ಸ್ವೀಕರಿಸುವುದಾಗಿ ಹೇಳಿದ್ದರು.ಅದಕ್ಕಾಗಿ  ಸಚಿವ ರೇವಣ್ಣ ಗುರುಗಳನ್ನು ಹುಡುಕುತ್ತಿರಬಹುದು. ಆದರೆ ರೇವಣ್ಣ ಒಬ್ಬರು ಬೇಡ, ಗೌಡರ ಇಡೀ ಕುಟುಂಬ ರಾಜಕೀಯ ಸನ್ಯಾಸ ಪಡೆಯಲಿ. ಇದರಿಂದ ಇಡಿ ರಾಜ್ಯಕ್ಕೆ ಒಳ್ಳೆಯದು ಎಂದು ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯದ ಬಗ್ಗೆ ಮಾತನಾಡಿದ ಅವರು, ಕುಮಾರಸ್ವಾಮಿ ಗ್ರಾಮ ವಾಸ್ತವ್ಯದಿಂದ ಅಭಿವೃದ್ಧಿ ಆಗಲ್ಲ. ಜನ ನಿಮಗೆ ಅಧಿಕಾರ ಕೊಟ್ಟಿರುವುದು ಕೇವಲ ಗ್ರಾಮ ವಾಸ್ತವ್ಯ ಮಾಡಲು ಅಲ್ಲ. ವಿಧಾನಸೌಧದಲ್ಲಿ ಕುಳಿತುಕೊಂಡು ಕೆಲಸ ಮಾಡಲು ಅಧಿಕಾರ ಕೊಟ್ಟಿದ್ದಾರೆ ಎಂದು ಕಿಡಿಕಾರಿದ್ದಾರೆ.


 

Share this Story:

Follow Webdunia kannada

ಮುಂದಿನ ಸುದ್ದಿ

ನಡು ರಸ್ತೆಯಲ್ಲೇ ಎನ್ ಸಿಪಿ ನಾಯಕಿ ಮೇಲೆ ಬಿಜೆಪಿ ಶಾಸಕರ ಬೆಂಬಲಿಗರಿಂದ ಹಲ್ಲೆ