Select Your Language

Notifications

webdunia
webdunia
webdunia
webdunia

ಲೋಕಸಮರ: ಕಾಂಗ್ರೆಸ್ ಪಕ್ಷ ವಿರೋಧಿಗಳ ಉಚ್ಛಾಟನೆಗೆ ಆಗ್ರಹ

ಲೋಕಸಮರ: ಕಾಂಗ್ರೆಸ್ ಪಕ್ಷ ವಿರೋಧಿಗಳ ಉಚ್ಛಾಟನೆಗೆ ಆಗ್ರಹ
ತುಮಕೂರು , ಬುಧವಾರ, 29 ಮೇ 2019 (16:19 IST)
ಹೆಚ್.ಡಿ.ದೇವೇಗೌಡರನ್ನು ತುಮಕೂರಿನಲ್ಲಿ ಸೋಲಿಸಲು ಕಾರಣವಾಗಿರುವ ಕೈ ಪಡೆಯ ನಾಯಕರನ್ನು ಪಕ್ಷದಿಂದ ಉಚ್ಛಾಟನೆ ಮಾಡುವಂತೆ ಬಲವಾಗಿ ಆಗ್ರಹ ಮಾಡಲಾಗುತ್ತಿದೆ.

ತುಮಕೂರು ಜಿಲ್ಲಾ ಕಾಂಗ್ರೆಸ್ ನಿಂದ ಕೆ.ಸಿ ವೇಣುಗೋಪಾಲ್ ಗೆ ದೂರು ಸಲ್ಲಿಕೆಯಾಗಿದೆ. ಪಕ್ಷ ವಿರೋಧ ಚಟುವಟಿಕೆ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ. ದೇವೇಗೌಡರ ಸೋಲಿಗೆ ಕಾರಣರಾದವರು ಕೆ.ಎನ್ ರಾಜಣ್ಣ.
ಕೆ.ಎನ್ ರಾಜಣ್ಣ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ. ರಾಜಣ್ಣ ಅವರನ್ನ ಪಕ್ಷದಿಂದ ಉಚ್ಛಾಟಿಸುವಸಂತೆ ದೂರು ಸಲ್ಲಿಸಿದ್ದಾರೆ ತುಮಕೂರು ಜಿಲ್ಲಾ ಕಾಂಗ್ರೆಸ್ ನಿಂದ.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಮಕೃಷ್ಣ ಹೇಳಿಕೆ ನೀಡಿದ್ದು, ರಾಜಣ್ಣ ಪಕ್ಷದ ಕಚೇರಿಗೆ ಬಂದು ತಮ್ಮ ವಿರುದ್ಧ ಮಾತಾಡದಂತೆ ನಮಗೆಲ್ಲ ಬೆದರಿಕೆ ಹಾಕಿದ್ದಾರೆ. ಅವರನ್ನ ಪಕ್ಷದಿಂದ ಉಚ್ಛಾಟಿಸಲು ಆಗ್ರಹಿಸ್ತೇವೆ ಎಂದರು.

ಇನ್ನು ಕೆಪಿಸಿಸಿ ವಕ್ತಾರ ಮುರಳಿಧರ ಹಾಲಪ್ಪ ಹೇಳಿಕೆ ನೀಡಿದ್ದು, ಕಾಂಗ್ರೆಸ್ ನಲ್ಲಿದ್ದುಕೊಂಡು ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಎಲ್ಲರ ವಿರುದ್ಧ ಪಕ್ಷ ಶಿಸ್ತುಕ್ರಮ ಕೈಗೊಳ್ಳಬೇಕು. ಪಕ್ಷ ಕ್ಲೀನ್ ಆದ್ರೆ ಮತ್ತೆ ಕಾಂಗ್ರೆಸ್ ಕಟ್ಟಬಹುದು. ಈ ಬಗ್ಗೆ ವೇಣುಗೋಪಾಲ್ ಗೆ ಮನವಿ ಸಲ್ಲಿಸಿದ್ದೇವೆ  ಎಂದರು.



Share this Story:

Follow Webdunia kannada

ಮುಂದಿನ ಸುದ್ದಿ

ಫೋನ್ ನಲ್ಲೇ ಎಲ್ಲಾ ಮಾಡು ಅಂತಾಳೆ ಆದರೆ...