Publish Date: Sun, 26 May 2019 (15:52 IST)
Updated Date: Sun, 26 May 2019 (15:53 IST)
ಲೊಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹಿನಾಯವಾಗಿ ಸೋತ ಹಿನ್ನಲೆಯಲ್ಲಿ ಕೈ ಪಡೆಯ ಪಕ್ಷದಲ್ಲಿ ಅಸಮಧಾನ ಭುಗಿಲೇಳುತ್ತಿದೆ.
ಬೀದರ್ ಕೈ ಪಾಳೆಯದಲ್ಲಿ ಭುಗಿಲೆದ್ದ ಅಸಮಾಧಾನ ಯಾವ ಹಂತಕ್ಕೆ ಹೋಗಲಿದೆ ಎನ್ನೋ ಕುತೂಹಲ ಮೂಡಿಸಿದೆ. ಬೀದರ್ ಲೊಕಸಭಾ ಕ್ಷೇತ್ರ ಸೋತಿದ್ದಕ್ಕೆ ಕೈ ಎಮ್ ಎಲ್ ಸಿ ಅರವಿಂದ ಅರಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೀದರ್ ಜಿಲ್ಲೆ ಕಾಂಗ್ರೆಸ್ ನ ಭದ್ರಕೋಟೆಯಾಗಿತ್ತು. ಆದರೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಬೀದರ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಾಬಶೆಟ್ಟಿ ಅತೀಯಾದ ಆತ್ಮವಿಶ್ವಾಸದಿಂದ ಕೈ ಕಾರ್ಯಕರ್ತರನ್ನು ಕಡೆಗಣಿಸಿದ್ದೆ ಸೋಲಿಗೆ ಕಾರಣ ಎಂದು ದೂರಿದ್ದಾರೆ.
ನೈತಿಕ ಹೊಣೆಹೊತ್ತು ಈಶ್ವರ ಖಂಡ್ರೆ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಗೆ ನೀಡಬೇಕು. ಜಿಲ್ಲಾಧ್ಯಕ್ಷ ಬಸರಾಜ ಜಾಬಶೆಟ್ಟಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಂತ ಖಂಡ್ರೆ ರಾಜೀನಾಮೆಗೆ ಆಗ್ರಹಿಸಿದ್ದಾರೆ ಕಾಂಗ್ರೆಸ್ ಎಮ್ ಎಲ್ ಸಿ ಅರವಿಂದ ಅರಳಿ.
ಬೀದರ್ ನಲ್ಲಿ ಅರವಿಂದ ಅರಳಿ ಹೇಳಿಕೆ ನೀಡಿದ್ದಾರೆ.