Select Your Language

Notifications

webdunia
webdunia
webdunia
webdunia

ಸ್ಥಾನ ಬದಲಾವಣೆ ಪರ್ವ; ಪ್ರಜ್ವಲ್ ರೇವಣ್ಣ ಆಯ್ತು, ಇದೀಗ ಪರಿಷತ್ ಸದಸ್ಯನ ಸರದಿ

ಸ್ಥಾನ ಬದಲಾವಣೆ ಪರ್ವ; ಪ್ರಜ್ವಲ್ ರೇವಣ್ಣ ಆಯ್ತು, ಇದೀಗ ಪರಿಷತ್ ಸದಸ್ಯನ ಸರದಿ
ಚಾಮರಾಜನಗರ , ಭಾನುವಾರ, 26 ಮೇ 2019 (15:41 IST)
ಕಡಿಮೆ ಅಂತರದಲ್ಲಿ ಸೋತಿರುವ ಚಾಮರಾಜನಗರ ಸಂಸದ ಆರ್. ಧೃವನಾರಾಯಣ್ ಅವರಿಗಾಗಿ ಪರಿಷತ್ ಸ್ಥಾನ ತ್ಯಜಿಸಲು ಮುಂದಾಗಿದ್ದಾರೆ ಧರ್ಮಸೇನಾ.

ಕಾಂಗ್ರೆಸ್ ಪಕ್ಷಕ್ಕೆ ಧೃವನಾರಾಯಣ್ ಸೇವೆ ಅಗತ್ಯವಿದೆ. ನನ್ನ ಸ್ಥಾನ ತ್ಯಜಿಸುವ ವಿಚಾರ ಸಿದ್ದರಾಮಯ್ಯ ಗಮನಕ್ಕೆ ತಂದಿಲ್ಲ. ಪಕ್ಷದ ಜಿಲ್ಲಾಧ್ಯಕ್ಷರಿಗೆ ನಾನು ನನ್ನ ನಿರ್ಧಾರ ತಿಳಿಸಿದ್ದೇನೆ. ದೇಶದಲ್ಲಿ ಎಲ್ಲೆಡೆ ಭಾರಿ ಬಹುಮತದಲ್ಲಿ ಗೆದ್ದರೂ  ಚಾಮರಾಜನಗರದಲ್ಲಿ ಧೃವನಾರಾಯಣ್ ಭಾರಿ ಪೈಪೋಟಿ ನೀಡಿದ್ದಾರೆ.

ನಾನು ಚುನಾಯಿತ ಪ್ರತಿನಿಧಿ, ಆದ್ರೆ ಧೃವನಾರಾಯಣ್ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡವರು. ಉತ್ತಮ ಕೆಲಸ ಮಾಡಿ ಸೋತ ಧೃವನಾರಾಯಣ್ ಅಧಿಕಾರದಲ್ಲಿ ಇಲ್ಲದೆ ಇದ್ರೆ ಕಷ್ಟ. ಹೀಗಾಗಿ ನನ್ನ ಸ್ಥಾನವನ್ನು ಆರ್.ಧೃವನಾರಾಯಣ್ ಅವರಿಗೆ ಬಿಟ್ಟುಕೊಡುತ್ತೇನೆ ಎಂದಿದ್ದಾರೆ.

ಇನ್ನು ಚಾಮರಾಜನಗರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಸ್ವಾಮಿ ಮಾತನಾಡಿದ್ದು, ಚಾಮರಾಜನಗರ ಜನ ಪಶ್ಚಾತ್ತಾಪ ಪಡೋ ದಿನ ದೂರ ಇಲ್ಲ. ಯಾಕಪ್ಪ ನಾವು ಆರ್.ಧೃವನಾರಾಯಣ್ ಸೋಲಿಸಿದ್ವಿ ಅನ್ನೋ ಕಾಲ ಬರುತ್ತೆ. ನಾವು ಅಷ್ಟೋಂದು ಕೆಲಸ ಮಾಡಿದ್ದರೂ ನಮ್ಮನ್ನು ಜನ ಕೈ  ಬಿಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಭಾರೀ ಗಾತ್ರದ ಹೆಬ್ಬಾವು ರಕ್ಷಿಸಿದವರು ಯಾರು?