Select Your Language

Notifications

webdunia
webdunia
webdunia
webdunia

ಮೋದಿ ಭ್ರಷ್ಟಾಚಾರದ ಭಾಗಿದಾರ ಎಂದ ಸಿದ್ದರಾಮಯ್ಯ

ಮೋದಿ ಭ್ರಷ್ಟಾಚಾರದ ಭಾಗಿದಾರ ಎಂದ ಸಿದ್ದರಾಮಯ್ಯ
ಬೀದರ್ , ಸೋಮವಾರ, 13 ಆಗಸ್ಟ್ 2018 (17:37 IST)
ಪ್ರಧಾನಿ ನರೇಂದ್ರ ಮೋದಿ ಸುಳ್ಳು  ಭರವಸೆಯನ್ನ ನೀಡಿದ್ದಾರೆ. ಅವರಿಗೆ ಮುಂದಿನ ಲೋಕ ಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಿದೆ. ಮೋದಿ ಪ್ರಧಾನಿ ಅಲ್ಲ ಅವರು ಭ್ರಷ್ಟಾಚಾರದ ಭಾಗಿದಾರ ಅಂತ ಮೋದಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಬೀದರ್ ನಲ್ಲಿ ಏರ್ಪಡಿಸಿದ್ದ ಬೃಹತ್ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಮೋದಿ ಕಪ್ಪು ಹಣ ಭಾರತಕ್ಕೆ ತರುತ್ತೇನೆ ಅಂತ ಸುಳ್ಳು ಭರವಸೆ ನೀಡಿದ್ದಾರೆ. ಎರಡು ಕೋಟಿ ಉದ್ಯೋಗ ಎಲ್ಲಿ ಹೋಯ್ತು? ಕಪ್ಪು ಹಣ ಎಲ್ಲಿ ಹೋಯ್ತು? ಎಂದು ಪ್ರಶ್ನಿಸಿದರು.

ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತೆ. ಮೋದಿಯವರದ್ದು ಕೇವಲ ಮನ್ ಕಿ ಬಾತ್ ಕಾಮ್ ಕಿ ಬಾತ್ ಇಲ್ಲಾ ಎಂದು ಟೀಕಿಸಿದರು. ಮುಂದಿನ ಲೋಕ ಸಭಾ ಚುನಾವಣೆಯಲ್ಲಿ ಈ ಭಾಗದಿಂದ ಹೆಚ್ಚಿನ ಸ್ಥಾನ ಗೆಲ್ಲಿಸಿ ಕಳುಹಿಸಬೇಕು.

ಬಡವರಿಗೆ ನ್ಯಾಯ ಕೆಲಸ ಕೊಡುವಂತ ಕೆಲಸ ಮಾಡ್ತಿವಿ. ಪ್ರಜಾ ಪ್ರಭುತ್ವ ಉಳಿಯಬೇಕಾದ್ರೆ ರಾಹುಲ್ ಗಾಂಧಿ ಗೆ ಪ್ರಧಾನಿ ಮಾಡಬೇಕು. ಬಿಜೆಪಿ ದಲಿತರ ರಕ್ಷಣೆ ಮಾಡ್ತಿವಿ ಅಂತ ಗಿಮಿಕ್ ಮಾಡ್ತಾರೆ ಅಂತ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ಧರಾಮಯ್ಯ ಹೇಳಿಕೆ ನೀಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಏಳು ಗುಡ್ಡಗಳ ನಡುವಿರುವ ಬೃಹತ್ ಕೆರೆ ಕಂಡೀರಾ?