Publish Date: Thu, 16 May 2019 (15:20 IST)
Updated Date: Thu, 16 May 2019 (15:21 IST)
ಮಲ್ಲಿಕಾರ್ಜುನ ಖರ್ಗೆ ಎಂದೋ ಸಿಎಂ ಆಗಬೇಕಿತ್ತು ಎಂದಿರುವ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ಬೆನ್ನಲ್ಲೆ ಹಿರಿಯ ನಾಯಕರ ಹೇಳಿಕೆಗಳು ತಿರುವು ಪಡೆದುಕೊಳ್ಳುತ್ತಿವೆ.
ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಸಿಎಂ ಆಗೋಕೆ ಅರ್ಹರು ಜಾಸ್ತಿ ಜನ ಇದ್ದಾರೆ ಎಂದು ಹೇಳಿದ್ದೇನೆ ಎಂದಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಸಿಎಂ ಸ್ಥಾನಕ್ಕಿಂತ ದೊಡ್ಡ ಹುದ್ದೆಗೆ ಏರುವ ಅರ್ಹತೆ ಇದೆ. ಇಂದೇ ಸಿಎಂ ಆಗ್ತಾರೆ ಎಂದು ನಾನೇನು ಹೇಳಿಲ್ಲ ಅಂತ ಹೇಳಿದ್ರು.
ಬಹಳ ಜನ ಸಿಎಂ ಆಗೋ ರೇಸ್ ನಲ್ಲಿ ಇದ್ದಾರೆ. ಇದರಲ್ಲಿ ಸಚಿವ ಹೆಚ್. ಡಿ. ರೇವಣ್ಣ ಸಹ ಒಬ್ಬರು ಅಂತ ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.