Publish Date: Thu, 16 May 2019 (14:56 IST)
Updated Date: Thu, 16 May 2019 (14:57 IST)
ಮಲ್ಲಿಕಾರ್ಜುನ ಖರ್ಗೆ ಸಿಎಂಗಿಂತ ದೊಡ್ಡ ಸ್ಥಾನಕ್ಕೆ ಅರ್ಹರು ಎಂದು ಟ್ವಿಟ್ ವಿಚಾರ ಮತ್ತೆ ಚರ್ಚೆಯಲ್ಲಿದೆ.
ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಎಚ್. ಸಿ. ಮಹಾದೇವಪ್ಪ ಹೇಳಿಕೆ ನೀಡಿದ್ದು, ಕಾಂಗ್ರೆಸ್ ನಲ್ಲಿ ಮಲ್ಲಿಕಾರ್ಜುನ ಖರ್ಗೆ ದೊಡ್ಡವರು. ಸಂವಿಧಾನದ ಹುದ್ದೆ ಕೊಡುವಾಗ ಜಾತಿ ಆಧಾರ ಮೇಲೆ ಮಾತಾಡೋದು ತಪ್ಪು ಎಂದು ಹೇಳಿದ್ರು.
ಮಲ್ಲಿಕಾರ್ಜುನ ಖರ್ಗೆಗೆ ಸಿಎಂ ಗಿಂತ ದೊಡ್ಡ ಹುದ್ದೆ ಏರುವ ಅರ್ಹತೆ ಇದೆ. ಸಿಎಂ ಸ್ಥಾನ ಎನ್ನುವುದು ನಂಬರ್ ಗೇಮ್ ಇದ್ದ ಹಾಗೇ ಎಂದರು.
ಇನ್ನು ಹೆಚ್.ಡಿ. ರೇವಣ್ಣ ಸಹ ಸಿಎಂ ಸ್ಥಾನಕ್ಕೆ ಅರ್ಹ ಎನ್ನುವ ಸಿದ್ದರಾಮಯ್ಯ ಟ್ವಿಟ್ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಅವರು, ಸಿದ್ದರಾಮಯ್ಯ ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ ಅಂತ ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಎಚ್. ಸಿ. ಮಾಹದೇವಪ್ಪ ಹೇಳಿಕೆ ನೀಡಿದ್ರು.
Jagadeesh
Publish Date: Thu, 16 May 2019 (14:56 IST)
Updated Date: Thu, 16 May 2019 (14:57 IST)