Select Your Language

Notifications

webdunia
webdunia
webdunia
webdunia

ಪ್ರತ್ಯೇಕ ರಾಜ್ಯ: ಫೂಲಿಷ್ ಆರ್ಗ್ಯೂಮೆಂಟ್ ಎಂದ ಮಾಜಿ ಸಿಎಂ

ಪ್ರತ್ಯೇಕ ರಾಜ್ಯ: ಫೂಲಿಷ್ ಆರ್ಗ್ಯೂಮೆಂಟ್ ಎಂದ ಮಾಜಿ ಸಿಎಂ
ಮೈಸೂರು , ಭಾನುವಾರ, 29 ಜುಲೈ 2018 (14:27 IST)
ಅಖಂಡ ಕರ್ನಾಟಕದ ಪರಿಕಲ್ಪನೆ ಗೊತ್ತಿರದವರು ಪ್ರತ್ಯೇಕ ರಾಜ್ಯದ ಬಗ್ಗೆ ಕೇಳುತ್ತಿರುವುದು ಫೂಲಿಷ್ ಆರ್ಗ್ಯುಮೆಂಟ್ ಎಂದು ಮಾಜಿ ಮುಖ್ಯಮಂತ್ರಿ ಕಿಡಿಕಾರಿದ್ದಾರೆ.
ಅಖಂಡ ಕರ್ನಾಟಕ, ಏಕೀಕರಣದ ಹೋರಾಟದ ಬಗ್ಗೆ ಗೊತ್ತಿರದವರು ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಮೈಸೂರುನಲ್ಲಿ ಮಾತನಾಡಿದ ಅವರು, ನಾನೂ ಸಿಎಂ ಆಗಿದ್ದ ವೇಳೆ ಕೋಟ್ಯಾಂತರ ರೂ. ಹಣ ಕೊಟ್ಟಿದ್ದೇನೆ. ಭಾಗದ ಅಭಿವೃದ್ಧಿಗೆ ಹಣ ಕೊಟ್ಟಿದ್ದೇನೆ. ಈಗ ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡ್ತಾರೆ. ಅವರು ಅಧಿಕಾರದಲ್ಲಿದ್ದಾಗ ಭಾಗಕ್ಕೆ ಅವರ ಕೊಡುಗೆ ಏನು..? ಎಂದು  ಬಿಜೆಪಿಗೆ ನೇರವಾಗಿ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ. 

ಉಮೇಶ್ ಕತ್ತಿ ಸೇರಿದಂತೆ ಭಾಗದ ಅಭಿವೃದ್ಧಿಗೆ ಯಾರೂ ಕಾಣಿಕೆ ನೀಡಿಲ್ಲ. ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಕೊಡುಗೆ ಶೂನ್ಯ ಎಂದೂ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಆಯಿಲ್ ಹಾಗೂ ಸುಟ್ಟ ಪೇಪರ್ ತಿಂದೇ ಜೀವಿಸುತ್ತಿರುವ ಭೂಪ!