Publish Date: Mon, 23 May 2022 (10:10 IST)
Updated Date: Mon, 23 May 2022 (10:18 IST)
ಬೆಂಗಳೂರು: ಕಣ್ಣಾಮುಚ್ಚಾಲೆ ಆಟವಾಡುವ ನೆಪದಲ್ಲಿ ಬಾಲಕನ ಕುತ್ತಿಗೆಯಲ್ಲಿ ಚಿನ್ನದ ಸರ ಕಳ್ಳತನ ಮಾಡಿದ ಘಟನೆ ನಡೆದಿದೆ.
ಉದ್ಯಮಿಯೊಬ್ಬರ 6 ವರ್ಷದ ಪುತ್ರನ ಕುತ್ತಿಗೆಯಲ್ಲಿ ಮೂರೂವರೆ ಲಕ್ಷ ಮೌಲ್ಯದ ಸರ ಕಳ್ಳತನವಾಗಿದೆ. ಮದುವೆಗೆಂದು ಹೋಗಿದ್ದಾಗ ಮಗು ಇನ್ನಿಬ್ಬರು ಮಕ್ಕಳೊಂದಿಗೆ ಹೊರಗಡೆ ಆಟವಾಡುತ್ತಿದ್ದ. ಈ ವೇಳೆ ಯಾರೋ ಖದೀಮರು ಸರ ಎಗರಿಸಿದ್ದಾರೆ.
ಸರ ಕಳ್ಳತನಾದ ಬಗ್ಗೆ ಮಗು ಅಳುತ್ತಾ ಬಂದು ಪೋಷಕರಿಗೆ ತಿಳಿಸಿದ್ದಾನೆ. ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಬೈಕ್ ನಲ್ಲಿ ಬಂದಿದ್ದ ಇಬ್ಬರು ಸರ ಕಳ್ಳತನ ಮಾಡಿರುವುದನ್ನು ಖಚಿತಪಡಿಸಿದ್ದಾರೆ. ಇದೀಗ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.