Select Your Language

Notifications

webdunia
webdunia
webdunia
webdunia

ಮುದ್ದಹನುಮೇಗೌಡರ ಪರ ರಾಜಣ್ಣ ಪ್ರಚಾರ

Rajanna

geetha

ತುಮಕೂರು , ಶುಕ್ರವಾರ, 2 ಫೆಬ್ರವರಿ 2024 (18:42 IST)
ತುಮಕೂರು :  ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿರುವ ಮುದ್ದ ಹನುಮೇಗೌಡರ ಪರವಾಗಿ ಸಚಿವ ಕೆ.ಎನ್‌.ರಾಜಣ್ಣ ಪ್ರಚಾರ ಪ್ರಾರಂಭಿಸಿದ್ದಾರೆ. ಲೋಕಸಭಾ ಟಿಕೆಟ್‌ ಘೋಷಣೆ ಇನ್ನೂ ಬಾಕಿಯಿರುವಂತೆಯೇ ರಾಜಣ್ಣ ಅಖಾಡಕ್ಕಿಳಿದಿರುವುದು ಅಚ್ಚರಿ ಮೂಡಿಸಿದೆ. ಕಾಂಗ್ರೆಸ್‌ ಪಕ್ಷದ ಪ್ರಕಾರ ಇಂದಿನ ಪರಿಸ್ಥಿತಿಯಲ್ಲಿ ಮುದ್ದಹನುಮೇಗೌಡರು ಅಭರ್ಥಿಯಾಗುವುದು ಖಚಿತ ಎಂದೂ ಸಹ ಕೆ.ಎನ್‌.ರಾಜಣ್ಣ ಹೇಳಿದರು. 
 
ಮಧುಗಿರಿ ತಾಲೂಕಿನ ಗುಟ್ಟೆ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುದ್ದಹನುಮೇಗೌಡರೇ ನಮ್ಮ ಸಂಸದ ಸ್ಥಾನದ ಅಭರ್ಥಿ. ಈಗಲೇ ಹೇಳುತ್ತಿದ್ದೇನೆ. ಆಮೇಲೆ ಎಲ್ಲೂ ಹೇಳಿಲ್ಲ ಎನ್ನಬಾರದು ಎಂದು ಜನರಿಗೆ ತಾಕೀತು ಮಾಡಿರುವ ಕೆ.ಎನ್‌.ರಾಜಣ್ಣ, ಕಾಂಗ್ರೆಸ್‌ ಪಕ್ಷ ಅಭ್ಯರ್ಥಿಯಾದ ಮುದ್ದಹನುಮೇಗೌಡರಿಗೆ ಶೇ 99 ರಷ್ಟು ಮತ ನೀಡಿ ಗೆಲ್ಲಿಸಬೇಕು ಎಂದು  ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾರಿಯರ ಸಬಲೀಕರಣ , ಮಹಿಳೆಯರಿಗೆ ಆರ್ಥಿಕ ಶಕ್ತಿ