Publish Date: Fri, 02 Feb 2024 (15:23 IST)
Updated Date: Fri, 02 Feb 2024 (15:40 IST)
ಬೆಂಗಳೂರು- ನಗರದಲ್ಲಿ ಗನ್ ತೋರಿಸಿ ಲಾಂಗ್ ಬೀಸಿ ಪೆಪ್ಪರ್ ಸ್ಪ್ರೇ ಹಾಕಿ ಸಿಗರೇಟ್ ಡಿಸ್ಟ್ರಿಬ್ಯೂಟರ್ ನ ಅಟ್ಯಾಕ್ ಮಾಡಿ 15 ಲಕ್ಷ ಹಣ ದರೋಡೆ ಮಾಡಲಾಗಿದೆ.ಟಾಟಾ ಏಸ್ ವಾಹನದಲ್ಲಿದ್ದ ಡಿಸ್ಟ್ರಿಬ್ಯೂಟರ್ ಗೋಪಾಲ್ ನ ರಾಬರ್ಸ್ ಹಿಂಬಾಲಿಸಿದ್ದರು.ಕೆಂಗೇರಿಯಿಂದ ಅಂಗಡಿಗಳಿಂದ ಸಿಗರೇಟ್ ಬಿಲ್ ಕಲೆಕ್ಟ್ ಮಾಡ್ಕೊಂಡು ಬರ್ತಿದ್ರು.ನಾಗರಭಾವಿ ಪಾಪರೆಡ್ಡಿಪಾಳ್ಯಕ್ಕೆ ಗೋಪಾಲ್ ಬಂದಿದ್ದ .ನಾತೂರಾಮ್ ಎಂಬುವವರ ಅಂಗಡಿ ಬಳಿ ಸಿಗರೇಟ್ ಬಿಲ್ ಕಲೆಕ್ಟ್ ಮಾಡಲಿಕ್ಕೆ ಬಂದಿದ್ರು.
ಈ ವೇಳೆ ಡಿಯೋ ಬೈಕ್ ನಲ್ಲಿ ಮೂವರು ರಾಬರ್ಸ್ ಗಳ ಎಂಟ್ರಿ ಕೊಟ್ಟಿದ್ದಾರೆ.ಮೂವರ ಪೈಕಿ ಇಬ್ಬರು ಪೆಪ್ಪರ್ ಸ್ಪ್ರೇ ಹಾಕಿ ಗನ್ ತೋರಿಸಿ ಲಾಂಗ್ ಬೀಸಿದ್ದಾರೆ.ಪ್ರಾವಿಜನ್ ಸ್ಟೋರ್ ಒಳಗೆಲ್ಲ ಗೋಪಾಲ್ ರನ್ನ ಅಟ್ಟಾಡಿಸಿದ್ದಾರೆ. ಲಾಂಗ್ ಬೀಸಿದ ರಭಸಕ್ಕೆ ಹಣವಿದ್ದ ಬ್ಯಾಗ್ ಕಟ್ಟಾಗಿತ್ತು. ಕೂಡಲೇ ಹಣವಿದ್ದ ಬ್ಯಾಗನ್ನ ಆರೋಪಿಗಳು ಹೊತ್ತು ಹೊಯ್ದಿದಿದ್ದಾರೆ.ಅನ್ನಪೂರ್ಣೇಶ್ವರಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.