Publish Date: Sat, 06 Jan 2024 (19:07 IST)
Updated Date: Sat, 06 Jan 2024 (20:10 IST)
ಬೆಂಗಳೂರು-ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿ ರಾಜ್ಯದ ಹಲವೆಡೆ ಬಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ..ರಾಜ್ಯದಲ್ಲಿ ಜನವರಿ 10ರವರೆಗೆ ಮೋಡ ಕವಿದ ವಾತವರಣವಿದ್ದು, ಇದರ ಜೊತೆ ತುಂತುರು ಮಳೆಯಾಗುವ ಸಾದ್ಯತೆ ಇದೆ.
ದಕ್ಷಿಣ ಒಳನಾಡಿನ ಕೆಲವು ಜಿಲ್ಲೆ ಹಾಗೂ ಕರಾವಳಿ ಭಾಗದಲ್ಲಿ ಈಗಾಗಲೇ ತುಂತುರು ಮಳೆ ಸುರಿಯುತ್ತಿದೆ.. ಕೊಡಗು, ಮಂಡ್ಯ ,ದಕ್ಷಿಣ ಕನ್ನಡ ಉಡುಪಿ ಸೇರಿದಂತೆ ಹಲವೆಡೆ ಮಳೆಯಾಗಲಿದೆ.. ಸಿಲಿಕಾನ್ ಸಿಟಿಯಲ್ಲೂ ಮೋಡ ಕವಿದ ವಾತಾವರಣವಿದ್ದು,ಬೆಂಗಳೂರಿನ ಹಲವೆಡೆ ತುಂತುರು ಮಳೆಯಾಗುವ ಸಾದ್ಯತೆಯಿದೆ ಎಂದು ಹವಾಮಾನ ಇಲಾಖೆಯಿಂದ ಮಾಹಿತಿ ನೀಡಿದೆ.