Publish Date: Sat, 06 Jan 2024 (18:23 IST)
Updated Date: Sat, 06 Jan 2024 (18:34 IST)
ಕೊನೆಗೂ ಕನ್ನಡಪರ ಹೋರಾಟಗಾರರ ಒತ್ತಡಕ್ಕೆ ಸರ್ಕಾರ ಮಣಿದಿದೆ.. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ಕಾಯ್ದೆ ಜಾರಿಗೆ ಸರ್ಕಾರ ನಿರ್ಧಾರ ಮಾಡಿದೆ.. ನಿನ್ನೆಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರವನ್ನ ಕೈಗೊಳ್ಳಲಾಗಿದೆ.
ಸುಗ್ರೀವಾಜ್ಞೆ ಮೂಲಕ ಕಾಯ್ದೆ ಜಾರಿ ಮಾಡಲು ಸಿಎಂ ಸಿದ್ದರಾಮಯ್ಯ ನಿರ್ಧಾರಿಸಿದ್ದಾರೆ..ನಾಮಫಲಕಗಳಲ್ಲಿಶೇಕಡಾ 60 ರಷ್ಟು ಕನ್ನಡ ಕಡ್ಡಾಯ ಅಳವಡಿಕೆಗೆ ಸುಗ್ರೀವಾಜ್ಞೆ ಹೊರಡಿಸಿದ್ದು, ನಾಮ ಫಲಕಗಳಲ್ಲಿ ಕನ್ನಡ ಅಕ್ಷರ ಮೇಲ್ಬಾಗದಲ್ಲೇ ಇರಬೇಕು ಅಂತಾ ತಿಳಿಸಿದೆ.. ಅಲ್ಲದೇ ಕನ್ನಡ ಕಡ್ಡಾಯಕ್ಕೆ ಫೆಬ್ರವರಿ 28ರವೆಗೂ ಸರ್ಕಾರ ಗಡುವು ನೀಡಿದೆ.