Publish Date: Thu, 30 Jan 2020 (20:23 IST)
Updated Date: Thu, 30 Jan 2020 (20:25 IST)
ನಾಥೂರಾಂ ಗೋಡ್ಸೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಸಿದ್ಧಾಂತ ಒಂದೇ ಆಗಿದೆ.
ಹೀಗಂತ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟೀಕೆ ಮಾಡಿದ್ದಾರೆ. ಮಹಾತ್ಮ ಗಾಂಧಿಯವರನ್ನು ಕೊಂದಿರೋ ನಾಥೂರಾಮ್ ಗೋಡ್ಸೆ ಸಿದ್ಧಾಂತ ಪಾಲಿಸ್ತೇವೆ ಅಂತ ಮೋದಿ ಬಹಿರಂಗವಾಗಿ ಹೇಳಲಿ ಅಂತ ಸವಾಲು ಹಾಕಿದ್ದಾರೆ.
ವಯನಾಡಿನಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿಯವರ 72 ನೇ ಹುತಾತ್ಮ ದಿನ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಬೃಹತ್ ಪ್ರತಿಭಟನೆ ಬಳಿಕ ನಡೆದ ಕಾರ್ಯಕ್ರಮದಲ್ಲಿ ರಾಹುಲ್ ಪಾಲ್ಗೊಂಡಿದ್ರು.
ಗೋಡ್ಸೆ ಏನೇನು ಮಾಡಿದ್ದಾರೆ ಅನ್ನೋದು ಪ್ರಧಾನಿಗೆ ಸರಿಯಾಗಿ ಗೊತ್ತಿದೆ. ಪ್ರಧಾನಿಗೆ ಹಾಗೂ ಗೋಡ್ಸೆಗೆ ವ್ಯತ್ಯಾಸವಿಲ್ಲ ಅಂತ ಗುಡುಗಿದ್ದಾರೆ.