Publish Date: Tue, 28 Jan 2020 (18:28 IST)
Updated Date: Tue, 28 Jan 2020 (18:32 IST)
ಮಹಾತ್ಮ ಗಾಂಧಿ ಕಡೆಗೆ ನಮ್ಮ ನಡಿಗೆ ಅನ್ನೋ ಕಾರ್ಯಕ್ರಮವನ್ನು ಕೈ ಪಾಳೆಯದ ಮುಖಂಡರು ಶುರುಮಾಡಿದ್ದಾರೆ.
ಕಲಬುರಗಿ ಜಿಲ್ಲಾ ಕಾಂಗ್ರೆಸ್ ನಿಂದ ಜನೇವರಿ 30 ಹುತಾತ್ಮರ ದಿನದಂದು ನಮ್ಮ ನಡಿಗೆ ಮಹಾತ್ಮ ಗಾಂಧಿ ಕಡೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೀಗಂತ ಮಾಜಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಕಲಬುರಗಿ ಜಿಲ್ಲೆಯ ವಿವಿಧ ನಗರಗಳ ಕಾರ್ಯಕರ್ತರು ಪಾದಯಾತ್ರೆ ಮೂಲಕ ಆಗಮಿಸಲಿದ್ದಾರೆ. ಕಲಬುರಗಿಯಲ್ಲಿರೋ ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಬಳಿಕ ಜಗತ್ ವೃತ್ತದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದಿದ್ದಾರೆ.
ಕೆಲವರು ಗೋಡ್ಸೆ ವೈಭವೀಕರಣ ಮಾಡ್ತಿರೋದು ಸರಿಯಲ್ಲ ಅಂತ ಇದೇ ವೇಳೆ ಕಿಡಿಕಾರಿದ್ರು.