Select Your Language

Notifications

webdunia
webdunia
webdunia
webdunia

71ನೇ ಗಣರಾಜ್ಯೋತ್ಸವದ ಹಿನ್ನಲೆ; ರಾಜ್ ಪಥ್ ನಲ್ಲಿ ಧ್ವಜಾರೋಹಣ ನೇರವೇರಿಸಿದ ರಾಷ್ಟ್ರಪತಿ

71ನೇ ಗಣರಾಜ್ಯೋತ್ಸವದ ಹಿನ್ನಲೆ; ರಾಜ್ ಪಥ್ ನಲ್ಲಿ ಧ್ವಜಾರೋಹಣ ನೇರವೇರಿಸಿದ ರಾಷ್ಟ್ರಪತಿ
ನವದೆಹಲಿ , ಭಾನುವಾರ, 26 ಜನವರಿ 2020 (10:37 IST)
ನವದೆಹಲಿ : ಇಂದು 71ನೇ ಗಣರಾಜ್ಯೋತ್ಸವದ ಹಿನ್ನಲೆ ದೆಹಲಿಯ ರಾಜ್ ಪಥ್ ನಲ್ಲಿ ದೇಶದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಧ್ವಜಾರೋಹಣ ನೇರವೇರಿಸಿದ್ದಾರೆ.


ರಾಜ್ ಪಥ್ ಗೆ ಆಗಮಿಸಿದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಸ್ವಾಗತ ಕೋರಿದ್ದು, ಬಳಿಕ ರಾಷ್ಟ್ರಪತಿಗಳು ಧ್ವಜಾರೋಹಣ ಕಾರ್ಯ ನೇರವೇರಿಸಿದ್ದಾರೆ. ಈ ವೇಳೆ ಅತಿಥಿಯಾಗಿ ಆಗಮಿಸಿದ ಬ್ರೆಜಿಲ್ ಅಧ್ಯಕ್ಷ ಜೈರ್ ಬಲಸನೋರ್ ಉಪಸ್ಥಿತರಿದ್ದರು.


ಈಗಾಗಲೇ ರಾಜ್ ಪಥ್ ನಲ್ಲಿ ಮುಖ್ಯ ಕಮಾಂಡೆಂಟ್ ಅಮಿತ್ ಮಿಸ್ತ್ರಿ ನೇತೃತ್ವದಲ್ಲಿ ಆಕರ್ಷಕ ಪಥಸಂಚಲನ ಕಾರ್ಯಕ್ರಮ ನಡೆಯುತ್ತಿದ್ದು, ಸಾವಿರಾರು ಜನರು ಈ ದೃಶ್ಯವನ್ನು ವೀಕ್ಷಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

71ನೇ ಗಣರಾಜ್ಯೋತ್ಸವದ ಹಿನ್ನಲೆ; ಧ್ವಜಾರೋಹಣ ನೇರವೇರಿಸಿದ ರಾಜ್ಯಪಾಲರು