Select Your Language

Notifications

webdunia
webdunia
webdunia
webdunia

ಅನಂತ್ ಕುಮಾರ್ ಹೆಗ್ಡೆ ‘ಸಾರಿ’ ಎಂದ್ರು, ಪ್ರಕಾಶ್ ರಾಜ್ ಏನಂದ್ರು?!

ಅನಂತ್ ಕುಮಾರ್ ಹೆಗ್ಡೆ ‘ಸಾರಿ’ ಎಂದ್ರು, ಪ್ರಕಾಶ್ ರಾಜ್ ಏನಂದ್ರು?!
ಬೆಂಗಳೂರು , ಶುಕ್ರವಾರ, 29 ಡಿಸೆಂಬರ್ 2017 (08:19 IST)
ಬೆಂಗಳೂರು: ಸಂವಿಧಾನ ಬದಲಾಯಿಸಲು ಬಂದಿದ್ದೇವೆಂದು ವಿವಾದ ಸೃಷ್ಟಿಸಿದ್ದ ಕೇಂದ್ರ ಸಚಿವ ಅನಂತ ಕುಮಾರ್ ಹೆಗ್ಡೆ ವಿರುದ್ಧ ಕಿಡಿ ಕಾರಿದ್ದ ನಟ ಪ್ರಕಾಶ್ ರೈ ಇದೀಗ ಅವರು ಕ್ಷಮೆ ಕೇಳಿದ ನಂತರ ಏನಂತಿದ್ದಾರೆ?
 

ಅನಂತ ಕುಮಾರ್ ಹೆಗ್ಡೆ ಹೇಳಿಕೆ ನೀಡಿದ ಬೆನ್ನಲ್ಲೇ ಟ್ವಿಟರ್ ಮೂಲಕ ನಟ ಪ್ರಕಾಶ್ ರೈ ಈ ಸಚಿವರು ಇದೇನು ನಾನ್ ಸೆನ್ಸ್ ಮಾತನಾಡ್ತಿದ್ದಾರೆ ಎಂದು ಕಿಡಿ ಕಾರಿದ್ದರು. ಇದಕ್ಕೂ ಮೊದಲು ಉತ್ತರ ಕರ್ನಾಟಕದಲ್ಲಿ ಹಿಂದೂ ಪರ ಹೇಳಿಕೆ ನೀಡಿದ್ದಕ್ಕೂ ಪ್ರಕಾಶ್ ರೈ, ಸಚಿವರ ವಿರುದ್ಧ ಕಟು ಟೀಕೆ ಮಾಡಿದ್ದರು.

ಇದೀಗ ಅನಂತ ಕುಮಾರ್ ಹೆಗ್ಡೆ ತಮ್ಮ ಮಾತಿಗೆ ಕ್ಷಮೆ ಕೇಳಿದ ಮೇಲೆ ಪ್ರತಿಕ್ರಿಯಿಸಿರುವ ಪ್ರಕಾಶ್ ರೈ ‘ನಿಮ್ಮ ಅಭಿಪ್ರಾಯಕ್ಕೆ ಕ್ಷಮೆ ಕೋರಿದ್ದಕ್ಕೆ ಧನ್ಯವಾದಗಳು ಅನಂತ ಕುಮಾರ್ ಹೆಗ್ಡೆ ಜೀ..’ ಎಂದು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಐತಿಹಾಸಿಕ ತ್ರಿವಳಿ ತಲಾಖ್ ವಿಧೇಯಕ ಅಂಗೀಕಾರ