Publish Date: Thu, 28 Dec 2017 (20:57 IST)
Updated Date: Thu, 28 Dec 2017 (21:06 IST)
ಮುಸ್ಲಿಂ ಮಹಿಳೆಯರಿಗೆ ತ್ರಿವಳಿ ತಲಾಖ್ ನೀಡಿದರೆ ಅಪರಾಧ ಎಂದು ಪರಿಗಣಿಸುವ ಐತಿಹಾಸಿಕ ವಿಧೇಯಕಕ್ಕೆ ಲೋಕಸಭೆಯಲ್ಲಿ ಗುರುವಾರ ಅಂಗೀಕಾರ ದೊರೆತಿದೆ.
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ವಿಧೇಯಕವಾಗಿರುವ ತ್ರಿವಳಿ ತಲಾಖ್ ವಿಧೇಯಕಕ್ಕೆಮತದಾನದ ಮೂಲಕ ಅಂಗೀಕಾರ ದೊರೆತಿದೆ. ಯಾವುದೇ ತಿದ್ದುಪಡಿ ಇಲ್ಲದೇ ವಿಧೇಯಕಕ್ಕೆ ಅನುಮೋದನೆ ನೀಡಲಾಗಿದೆ.
ಕೇಂದ್ರ ಸಚಿವ ರವಿಶಂಕರ ಪ್ರಸಾದ್ ಲೋಕಸಭೆ ವಿಧೇಯಕವನ್ನು ಮಂಡಿಸಿದರು. ಮೊದಲು ವಿರೋಧಿಸಿದ ಕಾಂಗ್ರೆಸ್ ನಂತರ ಉಲ್ಟಾ ಹೊಡೆಯಿತು. ಇದರಿಂದ ಒಂದು ದೇಶ ಒಂದು ಕಾನೂನಿ ಕಡೆ ಕೇಂದ್ರ ಸರ್ಕಾರದ ಹೆಜ್ಜೆ ಇಟ್ಟಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.