Publish Date: Wed, 22 Sep 2021 (20:28 IST)
Updated Date: Wed, 22 Sep 2021 (20:31 IST)
ವಿಧಾನಸಭೆಯಲ್ಲಿ ಸಚಿವ ಸುಧಾಕರ್ ಮೇಲೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗರಂ ಆಗಿದ್ರು. ಸಿದ್ದರಾಮಯ್ಯ ಮಾತನಾಡುವಾಗ ಪದೇ ಪದೇ ಎದ್ದು ನಿಲ್ಲುತ್ತಿದ್ದ ಸುಧಾಕರ್ಗೆ ವರ್ಮಾ ಕಮಿಟಿ ವರದಿ ಗೊತ್ತಾ ಎಂದು ಪ್ರಶ್ನಿಸಿದ್ರು. ಇದಕ್ಕೆ ಸುಧಾಕರ್ ಗೊತ್ತಿಲ್ಲ ಅಂದಾಗ, ಹಾಗಾದ್ರೇ ಸುಮ್ನೆ ಕುಳಿತ್ಕೋಳಿ ಎಂದು ಬಾಯ್ಮುಚ್ಚಿದ್ರು. ಮತ್ತೊಮ್ಮೆ ಸಿದ್ದರಾಮಯ್ಯ ಆರೋಪಕ್ಕೆ ಉತ್ತರ ನೀಡಲು ಮುಂದಾದ ಸುಧಾಕರ್ಗೆ, ಗೃಹ ಸಚಿವರು ಸಮರ್ಥರಿದ್ದಾರೆ, ನಿನಗಿಂತ ಸೀನಿಯರ್ ಇದ್ದಾರೆ ಎಂದು ಸಿಟ್ಟಾದ್ರು.