Select Your Language

Notifications

webdunia
webdunia
webdunia
webdunia

ದರ್ಶನ್ ಮಾಡ್ಲಿ ಯಾರೇ ಪ್ರಚಾರ ಮಾಡ್ಲಿ ಸಿಎಂಗೆ ಸೋಲು ಖಚಿತ: ಕುಮಾರಸ್ವಾಮಿ

ದರ್ಶನ್ ಮಾಡ್ಲಿ ಯಾರೇ ಪ್ರಚಾರ ಮಾಡ್ಲಿ ಸಿಎಂಗೆ ಸೋಲು ಖಚಿತ: ಕುಮಾರಸ್ವಾಮಿ
ಬಾಗಲಕೋಟೆ , ಶನಿವಾರ, 5 ಮೇ 2018 (15:10 IST)
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಪರ ನಟ ದರ್ಶನ್ ಮತ್ತು ಚಿತ್ರನಟರ ಪ್ರಚಾರ ವಿಚಾರ ಕುರಿತಂತೆ ಪ್ರಸ್ತಾಪಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ದರ್ಶನ್ ಆದ್ರೂ ಪ್ರಚಾರ ಮಾಡ್ಲಿ ಯಾರಾದ್ರೂ ಮಾಡ್ಲಿ  ಪಾಪ ಸಿದ್ದರಾಮಯ್ಯನ ಪರಿಸ್ಥಿತಿ ಚಿತ್ರ ನಟರನ್ನು ಮುಂದಿಟ್ಟುಕೊಂಡು ಚುನಾವಣೆ ಮಾಡುವ ಪರಿಸ್ಥಿತಿ ಬಂದಿದೆ ಎಂದು ಲೇವಡಿ ಮಾಡಿದರು.
ಅಲ್ಲಿ ಗೆಲ್ಲುವ ಶಕ್ತಿ ಇಲ್ಲದಿರುವುದುಕ್ಕೆ ಚಿತ್ರ ನಟರನ್ನು ಹಿಡ್ಕೊಂಡು ಹೊರಟಿದ್ದಾರೆ...ಬಾಗಲಕೋಟೆ: ಬದಾಮಿ ಕ್ಷೇತ್ರಕ್ಕೆ ಆಗಮಿಸಿ ರೈತ ಸಮಾವೇಶದಲ್ಲಿ ಭಾವಹಿಸಿದ ಮಾಜಿ ಸಿಎಂ ಹೆಚ್.ಡಿ.  ಕುಮಾರಸ್ವಾಮಿ, ಬನಶಂಕರಿ ದೇವಿ ದರ್ಶನ ಪಡೆದು ಕೊಪ್ಪಳ ಜಿಲ್ಲೆಯತ್ತ ಹೆಲಿಕ್ಯಾಪ್ಟರ್ ಮೂಲಕ ಪ್ರಯಾಣ ಬೆಳಿಸಿದ್ರು. 
 
ಇದೇ ವೇಳೆ ಮಾತನಾಡಿದ ಮಾಜಿ ಸಿಎಂ ಎಚ್ .ಡಿ. ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಹರಿಹಾಯ್ದರು. 
 
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಪರ ನಟ ದರ್ಶನ್ ಆದ್ರು ಪ್ರಚಾರ ಮಾಡ್ಲಿ ಯಾರಾದ್ರು ಮಾಡ್ಲಿ ಅದು ಲೆಕ್ಕಕ್ಕಿಲ್ಲ. ಪಾಪ ಸಿದ್ದರಾಮಯ್ಯನ  ಪರಿಸ್ಥಿತಿ ಚಿತ್ರ ನಟರನ್ನು ಮುಂದಿಟ್ಟುಕೊಂಡು ಚುಣಾವಣೆ ಮಾಡುವ ಪರಿಸ್ಥಿತಿ ಬಂದಿದೆ. ಅಲ್ಲಿ ಗೆಲ್ಲುವುದಕ್ಕೆ ಶಕ್ತಿ ಇಲ್ಲದಿರುವುದಕ್ಕೆ ಚಿತ್ರ ನಟರನ್ನ ಹಿಡಿದುಕೊಂಡು ಹೊರಟಿದ್ದಾರೆ. ಸಿಎಂ ಗೆ ಎರಡು ಕ್ಷೇತ್ರದಲ್ಲಿ ಸೋಲು ಖಚಿತ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಬಾದಾಮಿಯಲ್ಲಿ ಹೇಳಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಅಭ್ಯರ್ಥಿಯಿಂದ ಚುನಾವಣೆ ಅಧಿಕಾರಿಗೆ ಅವಾಜ್