Select Your Language

Notifications

webdunia
webdunia
webdunia
webdunia

ಪರಮೇಶ್ವರ್ ಬೆಂಬಲಿಗರಿಂದ ಹಣ ಹಂಚಿಕೆ ಆರೋಪ

ಪರಮೇಶ್ವರ್ ಬೆಂಬಲಿಗರಿಂದ ಹಣ ಹಂಚಿಕೆ ಆರೋಪ
ತುಮಕೂರು , ಶನಿವಾರ, 5 ಮೇ 2018 (13:56 IST)
ಹೋಟೆಲ್‌ನಲ್ಲಿ ಪರಮೇಶ್ವರ್ ಬೆಂಬಲಿಗರಿಂದ ಹಣ ಹಂಚಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. 
ಎಡಗೈ ಸಮುದಾಯದ ದಲಿತ ನಾಯಕರುಗಳಿಗೆ ಹಣ ಹಂಚಿದ ಪರಮೇಶ್ವರ್ ಬೆಂಬಲಿಗರು.ಕೊರಟಗೆರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಗೆಲ್ಲಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಎಡಗೈ ಸಮುದಾಯದವರ ಓಲೈಕೆಗೆ ಮುಂದಾದ ಪರಮೇಶ್ವರ ಬೆಂಬಲಿಗರು.ತುಮಕೂರಿನ ಬಟವಾಡಿಯ ಬಾಲಾಜಿ ಹೋಟೆಲ್ ನಲ್ಲಿ ರಾತ್ರೋ ರಾತ್ರಿ ಹಣ ಹಂಚಿಕೆ ಮಾಡಲಾಗಿದೆ. 
 
ಪರಮೇಶ್ವರ್ ಬೆಂಬಲಿಗ ಕೇಶವ್ ಮೂರ್ತಿ ಮತ್ತು ಜಿಲ್ಲಾಧ್ಯಕ್ಷ ಕೆಂಚಮಾರಯ್ಯ ನೇತೃತ್ವದಲ್ಲಿ ಹಣ ಹಂಚಿಕೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. 
 
ಸುಮಾರು 1 ಕೋಟಿಗೂ ಹೆಚ್ಚು  ಹಣ ಹಂಚಿದ್ದಾರೆ ಎನ್ನಲಾಗಿದೆ. ಹಣ ಹಂಚುತ್ತಿದ್ದಾಗ ಚುನಾವಣಾಧಿಕಾರಿಗಳ ದಾಳಿ ನಡೆಸಿದ್ದಾರೆ. 
ದಾಳಿ‌ ಮಾಡುತ್ತಿದ್ದಂತೆ ಹೋಟೆಲ್ ನಿಂದ ಬೆಂಬಲಿಗರು ಪಲಾಯನ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ವಿರುದ್ಧ ಮೊಯಿಲಿ ಕಿಡಿ