Publish Date: Sat, 05 May 2018 (14:02 IST)
Updated Date: Sat, 05 May 2018 (14:03 IST)
ಶ್ರೀರಂಗಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಬಂಡಿಸಿದ್ದೇಗೌಡಗೆ ಪ್ರಚಾರದ ವೇಳೆ ಸಾರ್ವಜನಿಕರ ತರಾಟೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಹಳೆ ಸಂತೆಮೈದಾನದ ಬಳಿ ಘಟನೆ ನಡೆದಿದ್ದು ಚುನಾವಣಾ ಪ್ರಚಾರಕ್ಕೆ ಬಂದಾಗ ಸಾರ್ವಜನಿಕರಿಂದ ತರಾಟೆಕೆ.ಆರ್.ಎಸ್. ಜಲಾಶಯ ಪಕ್ಕದಲ್ಲಿದ್ದರೂ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ. ಹತ್ತು ವರ್ಷದ ಹಿಂದೆ ಮತ ಕೇಳಲು ಬಂದಿದ್ದೀರಿ.ಇದೀಗ ಮತ್ತೆ ಬಂದಿದ್ದೀರಿನಮ್ಮ ಊರಿಗೆ ನಿಮ್ಮ ಕೊಡುಗೆ ಏನು ಜನರ ತರಾಟೆ ಸಾರ್ವಜನಿಕರ ಪ್ರಶ್ನೆಗೆ ರಮೇಶ್ ಬಂಡಿಸಿದ್ದೇಗೌಡ ತಬ್ಬಿಬ್ಬಾಗಿದ್ದಾರೆ.
ಕೆಲವು ಯುವಕರು ಎದುರಾಳಿ ಜೆಡಿಎಸ್ ಅಭ್ಯರ್ಥಿ ರವೀಂದ್ರ ಪರ ಘೋಷಣೆ ಕೂಗಿದರೆ ರಮೇಶ್ ಬೆಂಬಲಿಗರು ಕಾಂಗ್ರೆಸ್ ಪರ ಘೋಷಣೆ ಕೂಗಿದ್ದಾರೆ.