Publish Date: Sat, 05 May 2018 (15:04 IST)
Updated Date: Sat, 05 May 2018 (15:05 IST)
ಚುನಾವಣಾಧಿಕಾರಿಗಳನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದ ಬ್ಯಾಟರಾಯನಪುರ ಬಿಜೆಪಿ ಅಭ್ಯರ್ಥಿ ಎ.ರವಿ. ಬೆಂಗಳೂರು ಉತ್ತರ ಅಗ್ರಹಾರ ಲೇಔಟ್ ನಲ್ಲಿ ನಡೆದಿರುವ ಘಟನೆ ಇದಾಗಿದೆ.
ಬಿಜೆಪಿ ಕಾರ್ಯಕರ್ತರ ಮನೆಗಳ ಮೇಲೆ ಕಟ್ಟಿದ್ದ ಬಿಜೆಪಿ ಬಾವುಟಗಳನ್ನ ತೆರವು ಮಾಡುವಂತೆ ಸೂಚಿಸಿದ ಬ್ಯಾಟರಾಯನಪುರ ಚುನಾವಣಾಧಿಕಾರಿಗಳು.ಇದ್ರಿಂದ ತಾಳ್ಮೆ ಕಳೆದುಕೊಂಡ ಎ.ರವಿ ಚುನಾವಣಾಧಿಕಾರಿಗಳನ್ನೆ ತರಾಟೆಗೆ ತೆಗೆದುಕೊಂಡು ಕೆಟ್ಟ ಪದಗಳಿಂದ ನಿಂದನೆ ಮಾಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಎ.ರವಿಯ ದುರ್ವರ್ತನೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಎ.ರವಿ ಚುನಾವಣಾಧಿಕಾರಿಗಳ ವಿರುದ್ಧ ಬಳಸಿರುವ ಅವಾಚ್ಯ ಪದಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಎ.ರವಿಯ ವರ್ತನೆ ಕಂಡು ಭಯ ಬಿದ್ದ ಚುನಾವಣಾಧಿಕಾರಿಗಳು, ಅವರ ವರ್ತನೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗುಡುಗಿದ್ದಾರೆ.