Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಇಷ್ಟು ದಿನ ಲಾಕ್ ಡೌನ್ ಮಾಡಿದಾಗ ಸಿದ್ಧತೆ ಯಾಕೆ ಮಾಡಿಲ್ಲ? ನೆಟ್ಟಿಗರ ಆಕ್ರೋಶ

webdunia
ಶನಿವಾರ, 8 ಮೇ 2021 (09:12 IST)
ಬೆಂಗಳೂರು: ಕೊರೋನಾ ಎದುರಿಸಲು ಸಹಾಯವಾಗಲು ಮತ್ತೆ ಎರಡು ವಾರಗಳ ಲಾಕ್ ಡೌನ್ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ನೆಟ್ಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಲಾಕ್ ಡೌನ್ ನಿಂದ ರಾಜಕಾರಣಿಗಳು, ಆಸ್ಪತ್ರೆಯವರು ದುಡ್ಡು ಮಾಡುತ್ತಾರೆ. ಉಳಿದವರ ಗತಿಯೇನು? ಕೃಷಿಕರು, ಕಾರ್ಮಿಕರಿಗೆ ಏನು ಪರಿಹಾರ ಕೊಡುತ್ತೀರಿ? ಎಂದು ಹಲವರು ಪ್ರಶ್ನಿಸಿದ್ದಾರೆ.

ಇನ್ನು, ತಯಾರಿ ಮಾಡಿಕೊಳ್ಳಲು ಲಾಕ್ ಡೌನ್ ಮಾಡುವುದು ಅನಿವಾರ್ಯ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿಕೆ ನೀಡಿದ್ದಕ್ಕೆ, ಹಾಗಿದ್ದರೆ ಕಳೆದ ಬಾರಿ ಲಾಕ್ ಡೌನ್ ಮಾಡಿದ್ದಾಗ ಏನೂ ತಯಾರಿ ಮಾಡಿರಲಿಲ್ಲವೇಕೆ? ಇಷ್ಟು ದಿನ ಟ್ರಯಲ್ ಮಾಡುತ್ತಾ ಕೂತಿದ್ದು ಯಾಕೆ? ಬಡಜನರ ಹೊಟ್ಟೆಪಾಡಿನ ಜೊತೆ ಆಟವಾಡಿದ್ದೇಕೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ಎರಡು ವಾರ ಲಾಕ್ ಡೌನ್ ಅಲ್ಲದ ನಿರ್ಬಂಧ