Select Your Language

Notifications

webdunia
webdunia
webdunia
webdunia

ಏಕವಚನದಲ್ಲಿ ನಗರಸಭೆ ಅಧಿಕಾರಿ-ಸದಸ್ಯರ ಜಟಾಪಟಿ

ಏಕವಚನದಲ್ಲಿ ನಗರಸಭೆ ಅಧಿಕಾರಿ-ಸದಸ್ಯರ ಜಟಾಪಟಿ
ಚಾಮರಾಜನಗರ , ಶನಿವಾರ, 28 ಜುಲೈ 2018 (17:48 IST)
ಸಚಿವರಿಗೆ ಹಮ್ಮಿಕೊಂಡಿದ್ದ ಪೌರ ಸನ್ಮಾನ ಕಾರ್ಯಕ್ರಮದ ವೇಳೆ ನಗರಸಭೆ ಸದಸ್ಯರೊಂದಿಗೆ ಅಲ್ಲಿನ ಕಿರಿಯ ಇಂಜಿನಿಯರ್ ಒಬ್ಬರು ಅಸಭ್ಯವಾಗಿ ವರ್ತಿಸಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಚಾಮರಾಜನಗರ ನಗರಸಭೆ ವತಿಯಿಂದ ಸ್ಥಳೀಯ ಶಾಸಕರೂ, ಹಿಂದುಳಿದ ವರ್ಗಗಳ ಸಚಿವರೂ ಆದ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಪೌರ ಸನ್ಮಾನ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಮುಗಿಯುತ್ತಿದ್ದಂತೆ ನಗರಸಭೆ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದ ಸಭೆ ಆರಂಭವಾಯ್ತು. ವೇಳೆ ನಗರಸಭಾ ಸದಸ್ಯ ಚಿನ್ನಸ್ವಾಮಿ, ಅಲ್ಲಿನ ಕಿರಿಯ ಇಂಜಿನಿಯರ್ ಬಸವರಾಜು ಅವರನ್ನು ಅಭಿವೃದ್ಧಿ ಕೆಲಸಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಮಾಡಿದ್ರು.

ವೇಳೆ ಜೆಇ ಬಸವರಾಜ್ ಸಹ ನಗರಸಭಾ ಸದಸ್ಯರೊಂದಿಗೆ ವಾಗ್ದಾಳಿಗೆ ಇಳಿದಿದ್ದು, ಏಕವಚನದಲ್ಲೇ ನಿಂದಿಸಿದ್ದಾರೆ. ಕುರಿತಂತೆ ನಗರಸಭಾ ಸದಸ್ಯ ಚಿನ್ನಸ್ವಾಮಿ ಪ್ರತಿಕ್ರಿಯಿಸಿ, ಜೆಇ ಬಸವರಾಜ್ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿರುವ ವ್ಯಕ್ತಿ. ಆತ ಸೋಮಾರಿ ಅವರನ್ನು ಇಲ್ಲಿಂದ ಬೇರೆಡೆ ವರ್ಗ ಮಾಡ್ಬೇಕೆಂದು ಜಿಲ್ಲಾಧಿಕಾರಿಗೆ ಆಗ್ರಹಿಸಿದ್ರು. ಕಿರಿಯ ಇಂಜಿನಿಯರ್ ಬಸವರಾಜ್ ಸಹ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ನಗರಸಭೆ ಸದಸ್ಯರು ನನ್ನನ್ನ ಬೈಯ್ದಿದ್ದರಿಂದ ನಾನೂ ಬೈದಿದ್ದೇನೆ ಎಂದಿದ್ದಾರೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಹೆಚ್ಡಿಕೆ 37 ಜೆಡಿಎಸ್ ಕ್ಷೇತ್ರಗಳ ಸಿಎಂ ಎಂದ ಬಿ.ಎಸ್.ಯಡಿಯೂರಪ್ಪ