Select Your Language

Notifications

webdunia
webdunia
webdunia
webdunia

ಲೋಕಸಭೆ ಕಲಾಪ ನಡೆಯುತ್ತಿರಬೇಕಾದರೆ ಗ್ಯಾಲರಿಯಲ್ಲಿದ್ದ ಅಧಿಕಾರಿ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ದೂರಿದ್ದೇಕೆ?!

ಲೋಕಸಭೆ ಕಲಾಪ ನಡೆಯುತ್ತಿರಬೇಕಾದರೆ ಗ್ಯಾಲರಿಯಲ್ಲಿದ್ದ ಅಧಿಕಾರಿ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ದೂರಿದ್ದೇಕೆ?!
ನವದೆಹಲಿ , ಮಂಗಳವಾರ, 24 ಜುಲೈ 2018 (09:29 IST)
ನವದೆಹಲಿ: ಸಂಸತ್ತಿನಲ್ಲಿ ಲೋಕಸಭೆ ಕಲಾಪಗಳು ನಡೆಯುತ್ತಿರಬೇಕಾದರೆ ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ಗ್ಯಾಲರಿಯಲ್ಲಿ ಕುಳಿತಿದ್ದ ಅಧಿಕಾರಿಯೊಬ್ಬರ ಬಗ್ಗೆ ಸ್ಪೀಕರ್ ಸುಮಿತ್ರಾ ಮಹಾಜನ್ ಗೆ ದೂರಿದ್ದಾರೆ.
 

ಸಂಸತ್ತಿನ ಕಲಾಪದ ನಡುವೆ ಈ ವ್ಯಕ್ತಿ ವಿಪಕ್ಷಗಳು ಮಾತನಾಡುವ ಎಲ್ಲಾ ಅಂಶಗಳನ್ನು ಬರೆದಿಟ್ಟುಕೊಳ್ಳುತ್ತಿದ್ದಾನೆ. ಇದರಿಂದ ನಮ್ಮ ಹಕ್ಕು ಕಸಿದುಕೊಂಡಂತಾಗುತ್ತಿದೆ ಎಂದು ಖರ್ಗೆ ಸ್ಪೀಕರ್ ಗೆ ದೂರಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ದೂರಿಗೆ ಸ್ಪಂದಿಸಿದ ಸುಮಿತ್ರಾ ಮಹಾಜನ್ ಕೂಡಲೇ ಈ ಬಗ್ಗೆ ಗಮನಹರಿಸುವುದಾಗಿ ಭರವಸೆ ನೀಡಿದರು. ಅಷ್ಟಕ್ಕೂ ಖರ್ಗೆ ಯಾವ ಅಧಿಕಾರಿಯ ಮೇಲೆ ಈ ದೂರು ಹೇಳಿದರು ಎಂಬುದು ತಿಳಿದುಬಂದಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿ ಧ್ವೇಷದ ವ್ಯಾಪಾರಿ: ಸಚಿವ ಪಿಯೂಷ್ ಗೋಯಲ್ ತಿರುಗೇಟು