Select Your Language

Notifications

webdunia
webdunia
webdunia
webdunia

‘ಪ್ರಕಾಶ್ ರೈಯದ್ದು ಉಗಿದು ಓಡುವ ಜಾಯಮಾನ’

‘ಪ್ರಕಾಶ್ ರೈಯದ್ದು ಉಗಿದು ಓಡುವ ಜಾಯಮಾನ’
ಬೆಂಗಳೂರು , ಮಂಗಳವಾರ, 14 ನವೆಂಬರ್ 2017 (09:06 IST)
ಬೆಂಗಳೂರು: ಕೇಂದ್ರ ಸರ್ಕಾರದ ಕ್ರಮಗಳ ವಿರುದ್ಧ ಕಿಡಿ ಕಾರುವ ಬಹುಭಾಷಾ ನಟ ಪ್ರಕಾಶ್ ರೈ ಬಗ್ಗೆ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ. ಪ್ರಕಾಶ್ ರೈಯದ್ದು ಉಗುಳಿ ಓಡುವ ಜಾಯಮಾನ ಎಂದು ಅವರು ಲೇವಡಿ ಮಾಡಿದ್ದಾರೆ.


ಅವರಂತೆ ಮಾತನಾಡಲು ನಮಗೆ ಬರುವುದಿಲ್ಲ. ನಮಗೆ ಮಾಡಲು ಬೇಕಾದಷ್ಟು ಕೆಲಸಗಳಿವೆ. ಗೌರಿ ಲಂಕೇಶ್ ಹತ್ಯೆ, ಹಿಂದೂ ಭಯೋತ್ಪಾದನೆ ಬಗ್ಗೆ ಮಾತನಾಡಿ ತಾನೊಬ್ಬ ಬಹುದೊಡ್ಡ ನಟ ಎಂದು ಪ್ರಕಾಶ್ ಸಾಬೀತು ಪಡಿಸಿದ್ದಾರೆ ಎಂದು ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.

ಅಮಿತಾಭ್, ಎನ್ ಟಿಆರ್ ಮುಂತಾದ ಬಹುದೊಡ್ಡ ನಟರೆಲ್ಲಾಈ ರೀತಿ ಟೀಕೆ ಮಾಡಿಕೊಂಡು ತಿರುಗಲಿಲ್ಲ. ತಮ್ಮ ವೃತ್ತಿ ಗೌರವ ಕಾಪಾಡಿಕೊಂಡರು. ಆದರೆ ಪ್ರಕಾಶ್ ರೈ ಹಾಗಲ್ಲ. ಉತ್ತರ ಪ್ರದೇಶ ಶಿಶು ಹತ್ಯೆ ಬಗ್ಗೆ ಮಾತನಾಡುವ ಪ್ರಕಾಶ್ ರೈ ಕೋಲಾರದಲ್ಲಿ ನಡೆದ ಮಕ್ಕಳ ಮಾರಣ ಹೋಮದ ಬಗ್ಗೆ ಮಾತನಾಡುವುದಿಲ್ಲವೇಕೆ? ಹಿಂದೂಗಳ ಹತ್ಯೆ ಬಗ್ಗೆ ಧ್ವನಿಯೆತ್ತುವುದಿಲ್ಲವೇಕೆ? ಕಾಂಗ್ರೆಸ್ ಸಚಿವರೊಂದಿಗೆ ವೇದಿಕೆ ಹಂಚಿಕೊಳ್ಳುವ ಪ್ರಕಾಶ್ ರೈ ತಮ್ಮ ಲಾಭಕ್ಕಾಗಿ ಕೇಂದ್ರದ ವಿರುದ್ಧ ಕಿಡಿ ಕಾರುತ್ತಾರೆ ಎಂದು ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈಯಲ್ಲಿ ದಾವೂದ್ ಇಬ್ರಾಹಿಂ ಆಸ್ತಿ ಇಂದು ಹರಾಜಿಗೆ